ಗೋಕಾಕ:ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ
ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 8 :
ಪಟ್ಟಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ಕೃಪಾ ಪೋಷಿತ ಶೃತಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಸೋಮವಾರ ಜರುಗಿತು.
ಸ್ಥಳೀಯ ಹಾಗೂ ಸುತ್ತಲಿನ ಗ್ರಾಮದ ಯುವ ಕಲಾವಿದರಿಂದ ರೂಪಗೊಂಡ ಕಲಾ ತಂಡ ಹಬ್ಬದ ಸಂಭ್ರಮದಂದು ಡಾ. ಬಿ.ಆರ್. ಅಂಬೇಡ್ಕರ ವೃತ್ತದ ಬಳಿ ಹಾಕಿದ ಭವ್ಯ ರಂಗ ಮಂಟಪದಲ್ಲಿ ಕನ್ನಡ-ಹಿಂದಿ ಬಾಷೆಯ ಸುಮಧುರ ಗೀತೆಗಳನ್ನು, ಯುವಗೀತೆ, ಜಾನಪದ ಗೀತೆ, ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನಮನ ರಂಜಿಸಿದರು. ರಾತ್ರಿಇಡೀ ಜರುಗಿದ ರಸಮಂಜರಿ ಕಾರ್ಯಕ್ರಮವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಡಾ. ರಾಜೇಂದ್ರ ಸಣ್ಣಕ್ಕಿ ಉದ್ಘಾಟಿಸಿ ಮಾತನಾಡಿ, ಮನುಷ್ಯ ಆರೋಗ್ಯವಂತನಾಗಿರಲು ಹಾಡು-ಕುಣಿತ, ಸಂಗೀತ ಅತ್ಯಂತ ದಿವ್ಯಔಷಧಿ ಆಗಿದೆ. ಸಂಗೀತದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕೌಜಲಗಿ ಕಲಾವಿದರ ತವರುಮನೆಯಾಗಿದ್ದು, ಇಲ್ಲಿ ಕಲೆ ಎಂಬುದು ಪ್ರತಿಯೊಬ್ಬರಲ್ಲೂ ರಕ್ತಗತವಾಗಿ ಬೆಳೆದು ಬಂದಿದೆ. ಹಾಗೆಯೇ ಪಟ್ಟಣದ ಜನ ಕಲಾ ಪೋಷಕರೂ ಆಗಿದ್ದು ಕಲಾವಿದರ ಬೆಳವಣಿಗೆಗೆ ಸದಾ ಬೆಂಬಲ ನೀಡಬೇಕೆಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ನೀಲಪ್ಪ ಕೇವಟಿ ವಹಿಸಿದ್ದರು. ಶ್ರೀಶೈಲ ಗಾಣಿಗೇರ, ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ, ಅಡಿವೆಪ್ಪ ದಳವಾಯಿ, ಮಂಜುನಾಥ ಸಣ್ಣಕ್ಕಿ, ಅಶೋಕ ಉದ್ದಪ್ಪನವರ, ಹಾಸೀಮ ನಗಾರ್ಚಿ, ಬಸವರಾಜ ಜೋಗಿ, ರಾಯಪ್ಪ ಬಳೋಲದಾರ, ಭೀಮಶಿ ಉದ್ದಪ್ಪನವರ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ರಾತ್ರಿಯಿಡಿ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.