RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರದು : ಕಾಂಗ್ರೆಸ್ ಮುಖಂಡ ಅಶೋಕ್

ಗೋಕಾಕ:ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರದು : ಕಾಂಗ್ರೆಸ್ ಮುಖಂಡ ಅಶೋಕ್ 

ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರದು : ಕಾಂಗ್ರೆಸ್ ಮುಖಂಡ ಅಶೋಕ್

ಗೋಕಾಕ ಜ 26 : ಗಡಿ ಸಮಸ್ಯೆ ಮತ್ತು ಭಾಷಾ ಸಮಸ್ಯೆ ಬೆಳಗಾವಿ ಜಿಲ್ಲಾ ವಿಭಜನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬಿರುವುದಿಲ್ಲ ಹಾಗಾಗಿ ಸರಕಾರ ಬೆಳಗಾವಿ ಜಿಲ್ಲಾ ವಿಭಜನೆ ಪೂರಕ ನಿರ್ಣಯ ತಗೆದುಕೊಂಡು ಆದಷ್ಟು ಬೇಗ ಗೋಕಾಕ ನೂತನ ಜಿಲ್ಲಾ ಕೇಂದ್ರ ಎಂದು ಘೋಷಿಸಬೇಕು ಎಂದು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು.

ಸೋಮವಾರದಂದು ನಗರದ ಜ್ಞಾನ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ನಡೆಜ ಚಳಿಗಾಲದ ಅಧಿವೇಶನದಲ್ಲಿ ಗೋಕಾಕ ಮಾಡಬೇಕು ಎಂದು ಯಾವಬ್ಬ ಜನಪ್ರತಿನಿಧಿ ಧ್ವನಿ ಎತ್ತದಿರುವುದು ಖಂಡನೀಯವಾಗಿದೆ. ಸರಕಾರದ ಮುಂದೆ ಚಿಕ್ಕೋಡಿ, ಬೈಲಹೊಂಗಲ, ಅಥಣಿ ಅವರು ಅವರವರ ಕೋರಿಗಳು ಇಡುವುದು ಸಹಜ ಆದರೆ ಸರಕಾರ ಯಾವ ತಾಲೂಕು ಜಿಲ್ಲೆಯಾಗಲು ಸೂಕ್ತ ಎಂಬುದನ್ನು ಪರಿಗಣಿಸಿ ಹೊಸ ಜಿಲ್ಲೆ ಮಾಡಬೇಕು.
ಗೋಕಾಕ ತಾಲೂಕಿನಷ್ಟು ಜನಸಂಖ್ಯೆ ಇರುವ ಹಲವು ನಗರಗಳು ಜಿಲ್ಲೆಯಾಗಿವೆ.ಆದರೆ ರಾಜ್ಯದಲ್ಲಿ ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ಜಿಲ್ಲೆ ಮಾಡಬೇಕು.ಈ ಹೋರಾಟದ ಬಗ್ಗೆ ಸರಕಾರ ಮಿನಮೇಷ ತೊರುತ್ತಿದ್ದೆ.ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇದಕ್ಕೆ ಸರಕಾರದ ಮಟ್ಟದಲ್ಲಿ ಹೋರಾಟ ಮಾಡಬೇಕು. ಬರಿ ಎರೆಡು ತಾಲೂಕುಗಳನ್ನು ಸೇರಿಸಿ ಜಿಲ್ಲೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ಜಿಲ್ಲೆ ಆಗುವುದು ಹಿಂದುಳಿದ್ದೆ. ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು ಇದಕ್ಕೆ ಪೂರಕವಾಗಿ ಸ್ವಂದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಇದರ ಬಗ್ಗೆ ಕಾಳಜಿ ವಹಿಸಿ ಕಾರ್ಯಮಾಡಬೇಕು. ಆದಷ್ಟು ಬೇಗನೆ ಉಸ್ತುವಾರಿ ಸಚಿವರು ಎಲ್ಲಾ ಶಾಸಕರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಇದರ ಬಗ್ಗೆ ಸೂಕ್ತ ನಿರ್ಣಯ ಮಾಡಬೇಕು.

ಯಾವುದೇ ಒಂದು ನಿಲುವಿಗೆ ಪರ ವಿರೋಧ ಇರುವುದು ಸಹಜ ಆದರೆ ಸರಕಾರ ಇದಕ್ಕೆ ಘಟಿ ನಿಲುವು ತಾಳಿ ಗೋಕಾಕ ಜಿಲ್ಲೆಯನ್ನು ಘೋಷಿಸಬೇಕು. ಬೇರೆ ತಾಲೂಕುಗಳನ್ನು ಜಿಲ್ಲೆ ಮಾಡಲಿಕ್ಕೆ ನಮ್ಮ ವಿರೋಧ ವಿಲ್ಲ ಆದರೆ ನಮ್ಮ ಮೊದಲ ಬೇಡಿಕೆ ಗೋಕಾಕ ಜಿಲ್ಲೆಯಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ನಡೆಯುತ್ತದೆ ಎಂದ ಅವರು ಬರುವ ದಿನಗಳಲ್ಲಿ ಕಂದಾಯ ಸಚಿವ ಮತ್ತು ಮುಖ್ಯಮಂತ್ರಿಗಳಿಂದ ನಿಯೋಗ ಒಯ್ದು ಗೋಕಾಕ ಜಿಲ್ಲೆಗೆ ಆಗ್ರಹಿಸಲಾಗುವುದು ಎಂದು ಅಶೋಕ್ ಪೂಜಾರಿ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಅರ್ಜುನ್ ಪಂಗನ್ನವರ, ದಸ್ತಗಿರಿ ಪೈಲವಾನ, ನಿಂಗಪ್ಪ ಅಮ್ಮಿನಬಾವಿ, ಸದಾಕತಅಲಿ ಮಕಾನದಾರ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.

Related posts: