ಗೋಕಾಕ:ಮಾಲತಿಶ್ರೀ ರಂಗಪ್ರಶಸ್ತಿ’ಗೆ ಪ್ರೇಮಾ ಗುಳೇದಗುಡ್ಡ ಹಾಗೂ ಮಹದೇವ ಹೊಸೂರ ಆಯ್ಕೆ : ಮಾಲತಿಶ್ರೀ ಮಾಹಿತಿ
‘ಮಾಲತಿಶ್ರೀ ರಂಗಪ್ರಶಸ್ತಿ’ಗೆ ಪ್ರೇಮಾ ಗುಳೇದಗುಡ್ಡ ಹಾಗೂ ಮಹದೇವ ಹೊಸೂರ ಆಯ್ಕೆ : ಮಾಲತಿಶ್ರೀ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 5 :
ಆಶಾಕಿರಣ ಕಲಾ ಟ್ರಸ್ಟ ವತಿಯಿಂದ ಪ್ರತಿ ವರ್ಷ ನೀಡುವ ರಂಗಭೂಮಿ ಕಲಾವಿದೆ ‘ಮಾಲತಿಶ್ರೀ ರಂಗಪ್ರಶಸ್ತಿ’ಗೆ ಈ ಬಾರಿ ಕಲಾವಿದೆ ಪ್ರೇಮಾ ಗುಳೇದಗುಡ್ಡ ಹಾಗೂ ಮಹದೇವ ಹೊಸೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷೆ ಮಾಲತಿಶ್ರೀ ಮೈಸೂರು ಹೇಳಿದರು
ಗುರುವಾರದಂದು ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಮಾಲತಿಶ್ರೀ ರಂಗಪ್ರಶಸ್ತಿಯ ಜೊತೆಗೆ ಈ ಸಾಲಿನಿಂದ ಬಿ.ಆರ್. ಅರಿಷಿಣಗೋಡಿ ರಂಗಪ್ರಶಸ್ತಿ ಮತ್ತು ಬಸವಣ್ಣೆಪ್ಪ ಹೊಸಮನಿ ರಂಗಪ್ರಶಸ್ತಿಯನ್ನು ನೀಡಲಾಗುವದು ಈ ಪ್ರಶಸ್ತಿಗೆ ಗೋಕಾಕಿನ ಇಬ್ಬರು ರಂಗಭೂಮಿ ಕಲಾವಿದರನ್ನು ಆಯ್ಕೆಮಾಡಲಾಗಿದ್ದು ,
ಬಿ.ಆರ್. ಅರಿಷಿಣಗೋಡಿ ರಂಗಪ್ರಶಸ್ತಿಗೆ ಸ್ಥಳೀಯ ಸಾಹಿತಿ ಹಾಗೂ ರಂಗಕಲಾವಿದ ಮಹಾಲಿಂಗ ಮಂಗಿ ಮತ್ತು ಬಸವಣ್ಣೆಪ್ಪ ಹೊಸಮನಿ ರಂಗಪ್ರಶಸ್ತಿಗೆ ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರಿಗೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದ ಅವರು
ಬರುವ ದಿ. 7ರಂದು ನಗರದ ರೋಟರಿ ರಕ್ತ ಭಂಡಾರದ ಶ್ರೀಮತಿ ಮಂಗಲಾದೇವಿ ಗಂಗಾಧರ ತಾಂವಶಿ ಸಭಾಭವನದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವದು ಎಂದು ಹೇಳಿದರು.
ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೆರವೇರಿಸುವರು. ಹಿರಿಯ ಚಿತ್ರನಟಿ ಶ್ರೀಮತಿ ಶೈಲಶ್ರೀ ಪ್ರಶಸ್ತಿ ವಿತರಿಸುವರು. ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ಚಲನಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ, ಟಿವಿ ನಟಿ ಕುಮಾರಿ ಶ್ವೇತಾ ರಾವ್, ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಆಗಮಿಸುವರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಗೋಕಾಆಕ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ವಹಿಸುವರು ಎಂದು ಮಾಲತಿಶ್ರೀ ಮಾಹಿತಿ ನೀಡಿದರು .
ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಹೆಸರು ಮಾಲತಿಶ್ರೀ ಮೈಸೂರು ಅವರ ಬಾಲ ನಟಿಯಾಗಿ ರಂಗಭೂಮಿಗೆ ಇಳಿದು ಸಾಕಷ್ಟು ಹೆಸರು ಮಾಡಿದ್ದು ಗೋಕಾಕ ನಗರವನ್ನು ಮರೆಯದೆ ಗೋಕಾಕಕ್ಕೆ ಆಗಮಿಸಿ ಪ್ರಶಸ್ತಿ ನೀಡಿ ಸಮಾರಂಭ ಮಾಡುತ್ತಿರುವದು ಶ್ಲಾಘನೀಯ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಶ್ರೀಮತಿ ರಜನಿ ಜೀರಗ್ಯಾಳ, ಸಂಗೀತಾ ಬನ್ನೂರ, ಸಂಜು ಅಶೋಕ ಪೂಜಾರಿ ಇದ್ದರು.