ಗೋಕಾಕ: ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ
ಕರ್ನಾಟಕ ಬಂದ : ಗೋಕಾಕನಲ್ಲಿ ರಾಜ್ಯ ರೈತ ಸಂಘ , ಕರವೇ ಶೆಟ್ಟಿ ಬಣದಿಂದ ಸಾಂಕೇತಿಕ ಪ್ರತಿಭಟನೆ
ಗೋಕಾಕ ಜೂ 12: ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕೆಲ ಕನ್ನಡ ಪರ ಸಂಘಟನೆಗಳು ಕರೆ ನಿಡಿರುವ ಕರ್ನಾಟಕ ಬಂದಗೆ ಗೋಕಾಕಿನಲ್ಲಿ ಅಷ್ಟೇನೂ ಬೆಂಬಲ ವ್ಯಕ್ತವಾಗಿಲ್ಲ .
ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಮತ್ತು ಚಲನಚಿತ್ರ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ನಿಡಿರುವ ಬಂದಗೆ ಗೋಕಾಕಿನ ಪ್ರವಿಣ ಶೆಟ್ಟಿ ಬಣದ ಕರವೇ ಸಂಘಟನೆ , ರಾಜ್ಯ ರೈತ ಸಂಘಟನೆ ಮಾತ್ರ ಸಾಂಕೇತಿಕವಾಗಿ ಬೆಂಬಲ ನಿಡಿ ಪ್ರತಿಭಟನೆ ನಡೆಸಿದವು ಆದರೆ ನಾರಾಯಣಗೌಡ ಬಣದ ಕರವೇ ಸೇರಿದಂತೆ ಸ್ಥಳೀಯ ಇನ್ನೀತರ ಕನ್ನಡಪರ ಸಂಘಟನೆಗಳು ಬಂದಗೆ ಬೆಂಬಲ ನಿಡುವ ಕುರಿತು ಯಾವುದೆ ಪ್ರತಿಕ್ರಿಯೆ ನೀಡಿಲ್ಲ
ನಗರದ ನಾಕಾ ನಂ.1 ರಲ್ಲಿ ಪ್ರವಿಣ ಶೆಟ್ಟಿ ಬಣದ ಕಾರ್ಯಕರ್ತರು ಮತ್ತು ರಾಜ್ಯ ರೈತ ಸಂಘದ , ಹಸಿರು ಸೈನ್ಯ ಕಾರ್ಯಕರ್ತರು ಒಂದು ಘಂಟೆಗೂ ಹೆಚ್ಚುಕಾಲ ರಸ್ತೆತಡೆ ನಡೆಸಿ ,ಟೈರಗೆ ಬೆಂಕಿಹಚ್ಚಿ ಬಂದಗೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಕಿರಣ ಢಮಾಮಗರ , ರೈತ ಸಂಘದ ತಾಲೂಕಾಧ್ಯಕ್ಷ ಭೀಮಶಿ ಗದಾಡಿ , ಜಿಲ್ಲಾ ಮುಖಂಡ ಗಣಪತಿ ಈಳಿಗೇರ , ರೈತ ಮುಖಂಡರಾದ ಜಕ್ಕಬಾಳ, ಶಿವನಗೌಡ ಅವರು ರಾಜ್ಯ ಸರಕಾರ ರೈತರ ಸಾಲ ಮನ್ನಾ ,ಬಯಲು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ , ಮಹಾದಾಯಿ ಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಲು ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಬಂದ ನಡೆದ ಪರಿಣಾಮ ನಗರದ ನಾಕಾ ನಂ1 ರಲ್ಲಿ ಅಂಗಡಿ ಮುಗಟ್ಟುಗಳು ಮುಚ್ಚಿದವು.
ಡಿ.ಎಸ್.ಎಸ್ ನ ಸತ್ಯಜಿತ ಕಲವಡೆ, ಸೇರಿದಂತೆ ರೈತ ಸಂಘ ಮತ್ತು ರೈತ ಸಂಘಟನೆಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನು ಇದರ ಪರಿಣಾಮ ಸಾರಿಗೆ ಸಂಸ್ಥೆಯ ಬಸ್ ಸಂಚಾರದ ಮೇಲೆ ಬಿಳದೆ ಬಸ್ಸುಗಳು ಸಹಜವಾಗಿ ಸಂಚರಿಸುತ್ತಿವೆ .ಆಟೋ,ಮ್ಯಾಕ್ಸಿಕ್ಯಾಬ್, 407 ಗೂಡುಸಗಳು ನಿರ್ಭಯವಾಗಿ ರಸ್ತೆಗಿಳಿದರೆ ಪೆಟ್ರೋಲ್ ಬಂಕ್, ಚಲನಚಿತ್ರ ಮಂದಿರಗಳು , ಬ್ಯಾಂಕ್ ಸೇರಿದಂತೆ ಭಾಗಶಃ ವ್ಯಾಪಾರಸ್ಥರು ತಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ನಿರತರಾಗಿದ್ಧು ಕಂಡು ಬಂದಿತು.