RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ

ಗೋಕಾಕ:ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ 

ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 :

 

ಮಾನವ ಧರ್ಮ ಶ್ರೇಷ್ಠವಾಗಿದ್ದು ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ ಎಂದು ಹೊಸದಿಲ್ಲಿಯ ಹಜರತ ಅಖದಸ್ ಮೌಲಾನಾ ಚತುರ್ವೇದಿ ಮಹಫುಜುರ ರಹಮಾನ ಶಾಹೀನ ಜಮಾಲಿ ಸಾಹಬ ಹೇಳಿದರು.
ಅವರು ಶುಕ್ರವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕøತಿ ಉತ್ಸವ ಮತ್ತು ಲಿಂ. ಬಸವ ಮಹಾಸ್ವಾಮಿಗಳ 14ನೇ ಪುಣ್ಯ ಸ್ಮರಣೋತ್ಸವ ಗದುಗಿನ ಜಗದ್ಗುರು ಮಹಾಸನ್ನಿಧಿ ಅವರಿಗೆ ಗುರುವಂದನೆ ಹಾಗೂ ಭಾವೈಕ್ಯತೆ ಸಮಾವೇಶದ ನೇತೃತ್ವವನ್ನು ವಹಿಸಿ ಮಾತನಾಡಿದರು.
ಎಲ್ಲ ಧರ್ಮಗಳಿಗೆ ಧರ್ಮ ಗುರುಗಳು ಇರುತ್ತಾರೆ. ಮಾನವ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವಿಂದು ಮುನ್ನಡೆಯಬೇಕು. ದೇವರಲ್ಲಿ ಪ್ರೀತಿ ವಿಶ್ವಾಸ ನಂಬಿಕೆಯಿಂದ ನಡೆದುಕೊಳ್ಳಬೇಕು. ನಮ್ಮ ಜೀವನ ಸ್ವರ್ಗದಂತೆ ಇರಬೇಕು. ಅದನ್ನು ನರಕವಾಗಲು ಬೀಡಬಾರದು. ದಯವೇ ಧರ್ಮದ ಮೂಲವಾಗಿದೆ.
ದೇಶದ ಕಲ್ಯಾಣಕ್ಕಾಗಿ ಮಹಾತ್ಮರ ಪೂಜ್ಯರ ಕೊಡುಗೆ ಅಪಾರವಾಗಿದೆ. ಮಾನವ ಜಾತಿ ಒಂದೇ ಇದೆ. ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಮುರುಘರಾಜೇಂದ್ರ ಶ್ರೀಗಳ ಸಾಮಾಜಿಕ ಕಳಕಳಿ ಹಾಗೂ ಧಾರ್ಮಿಕತೆ ಅಪಾರವಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಹಾಗೂ ಬರಹಗಳು ಹೂವಿನ ಹಾಸಿಗೆಯಂತೆ ಶೃಂಗಾರಗೊಂಡಂತೆ ಇದೆ. ಕರ್ನಾಟಕವು ಸಾಹಿತ್ಯಿಕ,ಸಂಸ್ಕøತಿಗೆ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾಗಿದೆ ಎಂದರು.

ನಗರದ ಶೂನ್ಯ ಸಂಪಾದನಾ ಮಠದ 14ನೇ ಶರಣ ಸಂಸ್ಕøತಿ ಉತ್ಸವದಲ್ಲಿ ಭಾವೈಕ್ಯತೆ ಸಮಾವೇಶದದಲ್ಲಿ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಜಿಯರಿಗೆ ಗುರುವಂದನೆ ಶ್ರೀಮಠದಿಂದ ನೆರವೇರಿಸಲಾಯಿತು.

ಎಡೆಯೂರು ಡಂಬಳ-ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಜಿಯವರು ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು ಜನರಲ್ಲಿ ಸಾಮರಸ್ಯ ಬಿಂಬಿಸಬೇಕು. ಭಾವೈಕ್ಯತೆಯಿಂದ ಬದುಕಬೇಕು. ಎಲ್ಲರಲ್ಲಿಯೂ ಲೇಸನ್ನು ಬಯಸುವ ಮನೋಭಾವವನ್ನು ಮುರುಘರಾಜೇಂದ್ರ ಶ್ರೀಗಳು ಮಾಡಿದ್ದಾರೆ. ಗುರುಗಳ ಸ್ಮರಣೆಯಲ್ಲಿ ಶರಣ ಸಂಸ್ಕøತಿ ಉತ್ಸವ ನಡೆಸುತ್ತಿರುವ ಕಾರ್ಯ ಶ್ಲಾಘನೀಯ. ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಹೆಚ್ಚಿನ ಸ್ಥಾನಮಾನ ಇದೆ. ಗುರು ಸಾಕ್ಷಾತ್ ಶಿವನ ಸ್ವರೂಪಿಯಾಗಿದ್ದಾನೆ. ಗುರುವಿನ ಮಾರ್ಗದರ್ಶನದಿಂದ ಸಾಧನೆ ಮಾಡಬೇಕು. ಮೋಕ್ಷ ಪಡೆಯಬೇಕಾದರೆ ಗುರುವಿನ ಸೇವೆ ಅತ್ಯಮೂಲ್ಯವಾಗಿದೆ. ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಮುಖ್ಯವಾಗಿದೆ ಎಂದರು.
ಶರಣ ಸಂಸ್ಕøತಿ ಉತ್ಸವ ಮತ್ತು ಭಾವೈಕ್ಯತೆ ಸಮಾವೇಶವನ್ನು ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸಿದರು.
ವೇದಿಕೆ ಮೇಲೆ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು, ಉಮೇಶ ಬಾಳಿ, ಅಬ್ದುಲ್‍ರಹಮಾನ ಅಲ್ಲಾಭಕ್ಷ ಶೇಖ ಮೌಲಾನಾ ಬಶೀರುಲ್-ಹಕ್ ಸಾಹನಕಾಸ್ಮಿ, ಜಾವೇದ ಗೋಕಾಕ, ತಮ್ಮಣ್ಣ ಕೆಂಚರಡ್ಡಿ, ಸಂಜು ಚಿಪ್ಪಲಕಟ್ಟಿ, ಬಸನಗೌಡ ಪಾಟೀಲ, ಶಂಕರ ಬೆಳಕೂಡ, ಮಲ್ಲಿಕಾರ್ಜುನ ಈಟಿ, ಮಹಾಂತೇಶ ತಾಂವಶಿ, ಸಿದಗೌಡ ಪಾಟೀಲ ಉಪಸ್ಥಿತರಿದ್ದರು.
ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಬಸವರಾಜ ಪಾವಟೆ, ಚಂದ್ರಪ್ಪ ಮೆಳವಂಕಿ, ಬಸವರಾಜ ಈಳಿಗೇರ, ಶ್ರೀಶೈಲ ವರ್ಜಿ, ಶ್ರೀಕಾಂತ ಗೋಕಾಕ, ಸುರೇಶ ನೇಗಿನಾಳ, ಶಿವಲಿಂಗಪ್ಪ ಬಳಿಗಾರ, ಬಸವಂತ ಕಮತಿ, ಸುಭಾಸ ಘೋರ್ಪಡೆ, ಪರಶುರಾಮ ಕೊಪ್ಪದ, ಸತೀಶ ಬನ್ನಿಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮವನ್ನು ಶರಣ ಸಂಸ್ಕøತಿಕ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳ್ಳಿ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.
ಸ್ಥಳೀಯ ಅಮ್ಮಾಜೀ ನೃತ್ಯ ತಂಡದ ವಿದ್ಯಾರ್ಥಿಗಳಿಂದ ಭಾವೈಕ್ಕೆತೆ ಸಾರುವ ನೃತ್ಯಗಳು ಜನಮನ ಸೋರೆಗೊಂಡವು
ಶುಕ್ರವಾರದಂದು ಮುಂಜಾನೆ ಶಾಲಾ ವಿದ್ಯಾರ್ಥಿಗಳಿಂದ ಅರಿವು-ಶಿಕ್ಷಣ-ಆರೋಗ್ಯ ಕಾಲ್ನಡಿಗೆ ಜಾಥಾ ಜರುಗಿತು. ನಂತರ ಷಟ್‍ಸ್ಥಳ ಧ್ವಜಾರೋಹಣವನ್ನು ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ನೆರವೇರಿಸಿದರು.

Related posts: