RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ :ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾ ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ : ಸಚಿವ ರಮೇಶ

ಗೋಕಾಕ :ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾ ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ : ಸಚಿವ ರಮೇಶ 

ರವಿವಾರದಂದು ಮುಂಜಾನೆ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಕಾಂಗ್ರೇಸ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ

ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾ ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ : ಸಚಿವ ರಮೇಶ

ಗೋಕಾಕ ಮೇ 6 : ದೇಶದ ಭವಿಷ್ಯವನ್ನು ಉಜ್ವಲ ಗೋಳಿಸುತ್ತೆನೆಂದು ಹೇಳಿ ಮತ ಪಡೆದು ಅಧಿಕಾರ ಗಿಟ್ಟಿಸಿದ ಪ್ರಧಾನಿ ಮೋದಿ ಅವರು ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಅವರು ರವಿವಾರದಂದು ಮುಂಜಾನೆ ತಾಲೂಕಿನ ಉಪ್ಪಾರಟ್ಟಿ , ಮಾಲದಿನ್ನಿ , ಅಜ್ಜನಕಟ್ಟಿ , ಮಮದಾಪೂರ ಸೇರಿದಂತೆ ಹಲವು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದರು

ಪ್ರಧಾನಿ ಮೋದಿ ಅವರು ತಮ್ಮ ಮಾತಿನ ಮೇಲೆ ಹಿಡಿತಕಳೆದುಕೊಂಡು ಪ್ರಧಾನಿ ಹುದ್ದೆಗೆ ಅಗೌರವ ತೋರಿ ಜನರಿಗೆ ಬರೀ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಮೇ 15 ರ ನಂತರ ಮೋದಿ ಮತ್ತು ಅಮಿತ ಶಾ ಮನೆ ಸೇರುವುದು ಗ್ಯಾರಂಟಿ ಇದರಿಂದ ಹತಾಸರಾಗಿ ಸಿದ್ದರಾಮಯ್ಯ ಸರಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ ಸರಕಾರ ರಾಜ್ಯದಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಸೂಮಾರು 56 ಸಾವಿರ ಕೋಟಿ ರೂ ಗಳನ್ನು ಬಿಡುಗಡೆಗೋಳಿಸಿ ಅಭಿವೃದ್ಧಿ ಪಡಡೆಸಿದೆ .ಬಿಜೆಪಿ ಅಧಿಕಾರದಲ್ಲಿರುವಾಗ ಬರೀ 18 ಸಾವಿರ ಕೋಟಿ ರೂ ನೀಡಿ ಜನರಿಗೆ ಮೋಸ ಮಾಡಿದೆ ಎಂದು ಸಚಿವ ರಮೇಶ ಹೇಳಿದರು

ಮಮದಾಪೂರ ಗ್ರಾಮದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು

ಕಾಂಗ್ರೇಸ ಪಕ್ಷ ಬಡವರ ಪರ , ರೈತರ ಪರ , ಕಳಕಳಿ ಇರುವ ಪಕ್ಷ ಈ ಪಕ್ಷದಿಂದಲೇ ಎಲ್ಲ ಸಮುದಾಯದವರ ಉದ್ಧಾರವಾಗಲು ಸಾಧ್ಯ ಈ ಸಾರಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಚ್ಚಿತ . ಬರುವ ಶನಿವಾರ ಮೇ 12 ರಂದು ಜರುಗುವ ಚುನಾವಣೆಯಲ್ಲಿ ನನಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಲು ಮತ್ತೊಮ್ಮೆ ಆರ್ಶಿವಾದ ಮಾಡಬೇಕೆಂದು ಸಚಿವ ರಮೇಶ ಮನವಿ ಮಾಡಿಕೊಂಡರು

ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ : ಬರುವ ದಿನಗಳಲ್ಲಿ ಸ್ಥಳೀಯವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಈ ಭಾಗವನ್ನು ಅಭಿವೃದ್ಧಿ ಪಡೆಸಲಾಗುವುದು . ವಿರೋದಿಗಳ ಮಾತಿಗೆ ಕಿವಿಕೋಡದೆ ಎಲ್ಲರು ತಮ್ಮಲ್ಲಿರುವ ಸಣ್ಣ ,ಸಣ್ಣ ಭೀನ್ನಾಭಿಪ್ರಾಯಗಳನ್ನು ಬದಿಗೋತ್ತಿ ನನ್ನ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು

ಸಭೆಯಲ್ಲಿ ಜಿ.ಪಂ ಸದಸ್ಯ ಮಡೆಪ್ಪಾ ತೋಳಿನವರ , ತಾ.ಪಂ ಸದಸ್ಯ ಸಿದ್ದಪ್ಪ ಕಮತಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ , ಮಮದಾಪೂರ ಗ್ರಾಮದ ಹಿರಿಯ ಜೀವಿ ಶಂಕರಗೌಡ ಪಾಟೀಲ , ಎಪಿಎಂಸಿ ನಿರ್ದೆಶಕ ಬಸವರಾಜ ಸಾಯನ್ನವರ , ಯುವ ಧುರೀಣ ಸಂತೋಷ ಜಾರಕಿಹೊಳಿ , ಗ್ರಾ.ಪಂ ಉಪಾಧ್ಯಕ್ಷ ಈರಣ್ಣಾ ಜನ್ಮಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: