ಘಟಪ್ರಭಾ:ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಚಾಲನೆ
ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಚಾಲನೆ
ಘಟಪ್ರಭಾ ಡಿ 29 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದನಗಳ ಪೇಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣಗೊಳ್ಳಲಿರುವ ಎಸ್.ಸಿ. ಎಸ್.ಟಿ ಸಮುದಾಯದ ವಿಧ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಗೆ ಪ.ಪಂ ಅಧ್ಯಕ್ಷೆ ಸುಜಾತಾ ಸುರೇಶ ಪೂಜೇರಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಂ.ದಳವಾಯಿ, ಪ.ಪಂ ಉಪಾಧ್ಯಕ್ಷೆ ಕಸ್ತೂರಿ ಕೆಂಪಣ್ಣಾ ಚೌಕಶಿ, ಸಮಾಜ ಕಲ್ಯಾಣ ಅಧಿಕಾರಿ ಕಲ್ಲಪ್ಪನವರ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಗಂಗಾಧರ ಬಡಕುಂದ್ರಿ, ಸಲೀಮ ಕಬ್ಬೂರ, ಪ್ರವೀಣ ಮಟಗಾರ, ಮಾರುತಿ ಹುಕ್ಕೇರಿ, ಇಮರಾನ ಬಟಕುರ್ಕಿ, ನಾಗರಾಜ ಚಚಡಿ, ಈರಗೌಡಾ ಕಲಕುಟಗಿ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಮಲ್ಲು ತುಕ್ಕಾನಟ್ಟಿ, ಸುರೇಶ ಪೂಜಾರಿ, ಶಿವುಪುತ್ರ ಕೊಗಣೂರ, ಬಸವರಾಜ ಹುದ್ದಾರ, ಶೇಖರ ಕುಲಗೋಡ, ಕುಮಾರ ಹುಕ್ಕೇರಿ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.