ಗೋಕಾಕ:ಸತೀಶ ಜಾರಕಿಹೊಳಿಯಿಂದ ಕುಟುಂಬದಲ್ಲಿ ಹುಳಿ ಹಿಂಡುವ ಕಾರ್ಯ: ರಮೇಶ ಜಾರಕಿಹೊಳಿ ಆರೋಪ

ಸತೀಶ ಜಾರಕಿಹೊಳಿಯಿಂದ ಕುಟುಂಬದಲ್ಲಿ ಹುಳಿ ಹಿಂಡುವ ಕಾರ್ಯ: ರಮೇಶ ಜಾರಕಿಹೊಳಿ ಆರೋಪ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 7:
ಜಾರಕಿಹೊಳಿ ಕುಟುಂಬದಲ್ಲಿಯೇ ಹುಟ್ಟಿ ಸಹೋದರರ ಮಧ್ಯೆ ಹುಳಿಯನ್ನು ಹಿಂಡುತ್ತಿರುವ ಸತೀಶ ಜಾರಕಿಹೊಳಿ ವಿರುದ್ಧ ಹರಿಹಾಯ್ದ ರಮೇಶ ಜಾರಕಿಹೊಳಿ ಅವರು,2008 ರಲ್ಲಿ ಸಹೋದರ ಭೀಮಶಿ ಜಾರಕಿಹೊಳಿ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಅದರಲ್ಲಿ ಯಶಸ್ವನ್ನು ಕಾಣದೇ ಈಗ ಇನ್ನೂರ್ವ ಸಹೋದರ ಲಖನ ಜಾರಕಿಹೊಳಿ ಅವರನ್ನು ಎತ್ತಿ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ಲಖನ ಅವರು ಶಾಸಕರು ಆಗುವುದಾರರೇ ಯಾವುದೇ ತ್ಯಾಗಕ್ಕೂ ಸಿದ್ದ, ಅವರು ನನ್ನ ಮೇಲೆ ನಂಬಿಕೆಯನ್ನು ಇಟ್ಟು ನಡೆಯಲಿ ನಾನು ಮುಂದಿನ ಭಾರಿ ಯಮಕಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೋಕಾಕ ಮತಕ್ಷೇತ್ರವನ್ನು ಲಖನ ಅವರಿಗೆ ಬಿಟ್ಟು ಕೊಡುವದಾಗಿ ವಾಗ್ದಾನ ಮಾಡಿದ ಅವರು, ಯಮಕನಮರಡಿ ಕ್ಷೇತ್ರದ ಜನತೆ ಸತೀಶ ಅವರ ಆಡಳಿತಕ್ಕೆ ಬೇಸತಿದ್ದಾರೆ. ಅವರ ಕ್ಷೇತ್ರವನ್ನು ಮೊದಲು ಅವರು ಗಟ್ಟಿ ಮಾಡಿಕೊಳ್ಳಲಿ ಎಂದು ರಮೇಶ ಜಾರಕಿಹೊಳಿ ವ್ಯಂಗವಾಡಿದರು.