ಗೋಕಾಕ:ಸಸಿಗಳನ್ನು ಹಚ್ಚಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬ ಆಚರಣೆ

ಸಸಿಗಳನ್ನು ಹಚ್ಚಿ ಕರವೇ ವತಿಯಿಂದ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬ ಆಚರಣೆ
ಗೋಕಾಕ ಜೂ 10 : ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಮತ್ತು ಘಟಪ್ರಭಾ ಅರಣ್ಯ ವಿಭಾಗ ಗೋಕಾಕ ಹಾಗೂ ಪ್ರಾದೇಶಿಕ ಅರಣ್ಯ ವಲಯ ಗೋಕಾಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರದಂದು ನಗರದ ಕೃಷಿ ಮಾರುಕಟ್ಟೆ ( ಎ.ಪಿ.ಎಂ.ಸಿ) ಆವರಣದಲ್ಲಿ ಸಸಿಗಳನ್ನು ಹಚ್ಚಲಾಯಿತ್ತು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಹನೀಫ್ ಸನದಿ, ಮಲ್ಲು ಸಂಪಗಾರ, ಕಲ್ಲೋಳೆಪ್ಪ ಗಾಡಿವಡ್ಡರ, ಶಾಂತಿನಾಥ್ ಹುಳ್ಳಿ, ಬಸವರಾಜ ಗಾಡಿವಡ್ಡರ, ಅಬ್ಬು ಮುಜಾವರ, ಗುರು ಮುನ್ನೋಳಿಮಠ, ಸಿದ್ದು ಖಾನಪ್ಪನವರ, ರಮೇಶ್ ಕಮತಿ, ಆನಂದ ಖಾನಪ್ಪನವರ, ರಾಮ ಕುಡ್ಡೇಮ್ಮಿ, ಮುಖಂಡರುಗಳಾದ ದುಂಡು ಬೀದರಿ, ಬಸವರಾಜ ಹತ್ತರಕಿ, ಮಹಾಂತೇಶ ಮಠಪತಿ, ಶ್ರೀಶೈಲ ಕುಂಬಾರ, ವಾಯ್.ಎಲ್.ಹೆಜ್ಜಗಾರ, ಜಗದೀಶ್ ಶಿಂಗಳಾಪೂರ, ಸುರೇಶ್ ಬಡೆಪ್ಪಗೋಳ, ರಾಜು ಕೆಂಚನಗುಡ್ಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.