ಬೆಳಗಾವಿ:ಪರಿಷತ್ ನಲ್ಲಿ ಸಭಾತ್ಯಾಗ ಮಾಡಿ ಹೊರನಡೆಥ ಪರಿಷತ್ ಬಿಜೆಪಿ ಸದಸ್ಯರು

ಪರಿಷತ್ ನಲ್ಲಿ ಸಭಾತ್ಯಾಗ ಮಾಡಿ ಹೊರನಡೆಥ ಪರಿಷತ್ ಬಿಜೆಪಿ ಸದಸ್ಯರು
ಬೆಳಗಾವಿ ಡಿ 13 : ವಕ್ಫ್ ಸಚಿವ ಜಮೀರ ಅಹ್ಮದ್ ಖಾನ ಅವರ ಹೇಳಿಕೆಯನ್ನು ಖಂಡಿಸಿ ಸದನವನ್ನು ಎರಡು ಬಾರಿ ಮುಂದೂಡಿದ ನಂತರ ಮತ್ತೆ ಸದನ ಪುನಃ ನಡೆದ ಸಂಧರ್ಭದಲ್ಲಿ ಬಿಜೆಪಿಯ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಮತ್ತೆ ಅದೇ ವಿಷಯ ಪ್ರಸ್ತಾಪಿಸಿದ ನಂತರ ಸದನದಲ್ಲಿ ಮತ್ತೆ ಗೊಂದಲ ಉಂಟಾಯಿತು. ಸಭಾಪತಿ ಅವರ ಗೊಂದಲ ಸೃಷ್ಟಿಸಿದೆ ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸದನಕ್ಕೆ ಮನವಿ ಮಾಡಿದರು ಸಹ ಬಿಜೆಪಿಯ ಪರಿಷತ್ ಸದಸ್ಯರು ಅದಕ್ಕೆ ಜಗ್ಗದೆ ಸಭಾತ್ಯಾಗ ಮಾಡಿ ಹೊರನಡೆದ ಘಟನೆ ಬುಧವಾರದಂದು ಪರಿಷತ್ತಿನಲ್ಲಿ ಜರುಗಿತ್ತು.