ರಾಮದುರ್ಗ:ಶೌಚಾಲಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಿ : ಜಿ.ಪಂ ಸಿಇಒ ಆರ್.ರಾಮಚಂದ್ರ
ಶೌಚಾಲಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಿ : ಜಿ.ಪಂ ಸಿಇಒ ಆರ್.ರಾಮಚಂದ್ರ
ರಾಮದುರ್ಗ ಜು 14 : ರಾಮದುರ್ಗ ತಾಲೂಕಿನಲ್ಲಿ 1153 ಗರ್ಭಿಣಿ, ಬಾಣಂತಿ ಸ್ತ್ರೀಯರಿಗೆ ಮತ್ತು ಬಹಳಷ್ಟು ಆಶಾ ಕಾರ್ಯಕರ್ತರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿದ್ದಾಗ ಹೇಗೆ ನೀವು ಗ್ರಾಮಸ್ಥರಿಗೆ ಶೌಚಾಲಯ ನೀರ್ಮಿಸಿ ಕೊಳ್ಳಲು ಹೇಳುತ್ತಿರಿ ಎಂದು ಜಿಲ್ಲಾ ಪಂಚಾಯತ ಕಾರ್ಯ ನೀರ್ವಾಹಕ ಅಧಿಕಾರಿ ಆರ್.ರಾಮಚಂದ್ರ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಅವರು ಸ್ಥಳಿಯ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಸಹಯೋಗದೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿವು ಮುಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಅತ್ಯಂತ ಹಿಂದುಳಿದಿದ್ದು ಕಾರ್ಯಕರ್ತೆಯರು ಕೇವಲ ಅಂಕಿ ಸಂಖ್ಯೆ ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು, ಜಾಗದ ಕೊರತೆ,ನೀರಿನ ತೊಂದರೆ, ಮನೆನೆ ಇಲ್ಲಾ ಎಂಬ ಸಬುಬನ್ನು ಕೇಳುವದನ್ನು ಬಿಟ್ಟು ಸರಕಾರದಿಂದ ಶೌಚಾಲಯ ನೀರ್ಮಾಣಕ್ಕಾಗಿ ಸಾಮಾನ್ಯ ಜನರಿಗೆ ರೂ.12000 ಮತ್ತು ಎಸ್.ಸಿ. ಎಸ್.ಟಿ ಜನರಿಗೆ ರೂ.15000 ಗೌರವಧನ ನೀಡುತ್ತಿದ್ದು ಅದರ ಬಗ್ಗೆ ಅರಿವು ಮುಡಿಸಬೇಕೆಂದರು.
ಪುರುಷರು ಮತ್ತು ತಮ್ಮ ತಮ್ಮ ಮನೆಯ ಹೆಣ್ಣು ಮಕ್ಕಳ ಮರ್ಯಾದೆ ಕಾಪಾಡಲು ಪ್ರತಿಯೊಬ್ಬರು ತಮ್ಮ ಮನೆಗೆ ಶೌಚಾಲಯ ನೀರ್ಮಾಣ ಮಾಡಿಕೊಳ್ಳಬೇಕು, ಜಿಲ್ಲೆಯನ್ನು ಬಯಲು ಶೌಚಮುಕ್ತವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿ ಎಲ್ಲರಿಗೆ ಸ್ವಚ್ಛ ಭಾರತ ಅಭಿಯಾನದ ಪ್ರಮಾಣ ವಚಣ ಬೋಧಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ ಮಾತನಾಡಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ 3 ಲಕ್ಷ ಶೌಚಾಲಯ ನೀರ್ಮಾಣ ಮಾಡುವ ಗುರಿ ಹೊಂದಿದ್ದು, ಎಲ್ಲ ಕಾರ್ಯಕರ್ತೆಯರು ಶ್ರಮ ಪಡಬೇಕು, ಪ್ರತಿ ಗರ್ಭಿಣಿ ಸ್ತ್ರೀಯರ ಮನೆಗೆ ಭೇಟಿ ನೀಡಿ ತಾಯಿಯ ಸ್ಥಾನ ಮಾನ ಕೊಡಬೇಕು, ಸರಕಾರದ ಈ ಯೋಜನೆ ಯಶಸ್ವಿಯಾಗಬೇಕಾದರೆ ತಮ್ಮ ಈಗಿನ ಕಾರ್ಯವೈಖರಿ ಬದಲಾಗಬೇಕು, ಪ್ರತಿಯೊಂದು ಮನೆಗೆ ಭೇಟಿ ಒಂದು ತಿಂಗಳಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯರಾದ ರಮೇಶ ದೇಶಪಾಂಡೆ ಮಾತನಾಡಿ ನಾವು ಮೊದಲು ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಸ್ತ್ರೀ ಶಕ್ತಿ ಅಸ್ತ್ರ ಉಪಯೋಗ ಮಾಡಿ ಮನಸ್ಸಿನ ನೈರ್ಮಲ್ಯತೆ ಹೋಗಲಾಡಿಸಿ ಜನರನ್ನು ಪ್ರೇರೆಪಿಸುವಂತಹ ಕಾರ್ಯವಾಗಬೇಕು, ಪರಿಸರದ ಜೊತೆ ತಮ್ಮ ಮರ್ಯಾದೆಯನ್ನು ಸಹ ಉಳಿಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆ ಮೇಲೆ ಜಿ.ಪಂ.ಸದಸ್ಯ ರೇವಣಪ್ಪ ಸೋಮಗೊಂಡ, ಬಿ.ಎ.ಓ ಆರ್.ಟಿ.ಬಳಿಗಾರ, ಸಿ.ಡಿ.ಪಿ.ಓ ಖಾದರಬಿ ಸಂಕೇಶ್ವರ, ತಾ.ಪಂ.ಕಾ.ನಿ.ಅಧಿಕಾರಿ ಎಸ್.ಕೆ.ಪಾಟೀಲ ನೀರೂಪಿಸಿ ವಂದಿಸಿದರು, ಮತ್ತು ಸಾವಿರಾರು ಸಂಖ್ಯೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಜಾನಪದ ಹಾಡುಗಳನ್ನು ಹಾಡಿದರು.