ಬೆಳಗಾವಿ:ತಲೆ ಕೆಳಗಾದ ನಿರೀಕ್ಷೆಗಳು: ಕಾರ್ಯಕರ್ತರಲ್ಲಿ ಢವಢವ

ತಲೆ ಕೆಳಗಾದ ನಿರೀಕ್ಷೆಗಳು: ಕಾರ್ಯಕರ್ತರಲ್ಲಿ ಢವಢವ
ಬೆಳಗಾವಿ ಮೇ 13 : ಈವರೆಗೆ ನಡೆದ ಮತ ಎಣಿಕೆಯಲ್ಲಿ ಬೆಳಗಾವಿ ಗ್ರಾಮೀಣ, ಕುಡಚಿ, ಬೈಲಹೊಂಗಲ ಹಾಗೂ ನಿಪ್ಪಾಣಿ ಮತಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆಗಳು ತಲೆ ಕೆಳಗಾಗುತ್ತಿವೆ. ಪ್ರತಿ ಸುತ್ತಿನ ಮತ ಎಣಿಕೆ ಬಂದಾಗಲೂ ಕಾರ್ಯಕರ್ತರ ಎದೆಯಲ್ಲಿ ಢವಢವ ಶುರುವಾಗಿದೆ.
ಕುಡಚಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿಯ ಪಿ.ರಾಜೀವ್ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಈರೆಗೆ ಮುಗಿದ ನಾಲ್ಕೂ ಸುತ್ತುಗಳಲ್ಲಿ ಕಾಂಗ್ರೆಸ್ನ ಮಹೇಂದ್ರ ತಮ್ಮಣ್ಣವರ ಮುಂದಿದ್ದಾರೆ. ಕುಡಚಿ ಮತಕ್ಷೇತ್ರದಲ್ಲಿ 4 ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ 20919 ಮತ ಪಡೆದು, 12151 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಿ.ರಾಜೀವ್ 12151 ಮತ ಮಾತ್ರ ಪಡೆದಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ 6ನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳಕರ 20976 ಮತ, ಎಂಇಎಸ್ ಆರ್.ಎಂ. ಚೌಗಲೆ 13927 ಹಾಗೂ ಬಿಜೆಪಿ ನಾಗೇಶ ಮನ್ನೋಳಕರ 7723 ಮತ ಪಡೆದಿದ್ದಾರೆ. ಲಕ್ಷ್ಮೀಗೆ 7049 ಮತಗಳ ಮುನ್ನಡೆ ಸಿಕ್ಕಿದೆ. ಬಿಜೆಪಿ ಅಭ್ಯರ್ತಿ ಸತತ ಐದು ಸುತ್ತಿನಲ್ಲೂ ಮೂರನೇ ಸ್ತಾನಕ್ಕೆ ಕುಸಿದ್ದು, ಕಾರ್ಯಕರ್ತರಲ್ಲಿ ಢವಢವ ಶುರುವಾಗಿದೆ.