RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳಲ್ಲಿ ಸ್ವರ್ಧಾ ಮನೋಭಾವ ಹೆಚ್ಚಿಸುವಲ್ಲಿ ಕ್ರೀಡಾ ಚುಟುವಟಿಕೆಗಳು ಸಹಕಾರಿಯಾಗಿವೆ : ಎಲ್.ಕೆ ತೋರಣಗಟ್ಟಿ

ಗೋಕಾಕ:ವಿದ್ಯಾರ್ಥಿಗಳಲ್ಲಿ ಸ್ವರ್ಧಾ ಮನೋಭಾವ ಹೆಚ್ಚಿಸುವಲ್ಲಿ ಕ್ರೀಡಾ ಚುಟುವಟಿಕೆಗಳು ಸಹಕಾರಿಯಾಗಿವೆ : ಎಲ್.ಕೆ ತೋರಣಗಟ್ಟಿ 

ವಿದ್ಯಾರ್ಥಿಗಳಲ್ಲಿ ಸ್ವರ್ಧಾ ಮನೋಭಾವ  ಹೆಚ್ಚಿಸುವಲ್ಲಿ  ಕ್ರೀಡಾ  ಚುಟುವಟಿಕೆಗಳು ಸಹಕಾರಿಯಾಗಿವೆ : ಎಲ್.ಕೆ ತೋರಣಗಟ್ಟಿ

ಗೋಕಾಕ ಡಿ 21 : ವಿದ್ಯಾರ್ಥಿಗಳಲ್ಲಿ ಸ್ವರ್ಧಾ ಮನೋಭಾವ  ಹೆಚ್ಚಿಸುವಲ್ಲಿ  ಕ್ರೀಡಾ  ಚುಟುವಟಿಕೆಗಳು ಸಹಕಾರಿಯಾಗಿವೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವಿಕ್ಷೀಕ  ಎಲ್.ಕೆ ತೋರಣಗಟ್ಟಿ ಹೇಳಿದರು.
ಬುಧವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಚೆನ್ನಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು
ವಿದ್ಯಾರ್ಥಿಗಳು  ಓದಿನ ಜೊತೆಗೆ ಕ್ರೀಡಾಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದರೆ ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿಹೊಂದಲು ಸಾಧ್ಯ . ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಕೂಡಾ ವಿದ್ಯಾರ್ಥಿಗಳ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ನಿರ್ವಹಿಸುತ್ತಿದೆ . ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದ ಅವರು
ಮಗು ಯಾವ ಆಟದಲ್ಲಿ ಆಸಕ್ತಿ ಹೊಂದಿದ್ದಾನೆ  ಎಂಬುದನ್ನು ಗುರುತಿಸಿ ಪಾಲಕರು  ಪ್ರೋತ್ಸಾಹಿಸಿದರೆ ಆ ಮಗು ಒಬ್ಬ ಒಳ್ಳೆಯ ಕ್ರೀಡಾಪಟುವಾಗಿ ಹೊರಹೊಮ್ಮಲು  ಸಾಧ್ಯ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಸಂಜೀವ ಸಂವಸುದ್ದಿ ಮಾತನಾಡಿ  ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗಲು ಕ್ರೀಡಾ ಚಟುವಟಿಕೆಗಳು ಬಹಳ ಮುಖ್ಯವಾಗಿದ್ದು, ಆಟಗಳು ದೇಹವನ್ನು ಸದೃಢಗೋಳಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನೀಯರಾದ ಮುಸ್ಕಾನ ಬಾಗವಾನ ಮತ್ತು ನೈನಾ ಕಡಕೋಳ ನಿರೂಪಿಸಿದರು, ಸಿಂಚನಾ ನಾಗನೂರ ಸ್ವಾಗತಿಸಿದರು, ಕೀರ್ತಿ ನಂದಿ ವಂದಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗಮಿಮಠ, ನಿರ್ದೇಶಕ ಬಸನಗೌಡ ಪಾಟೀಲ, ಪ್ರಾಚಾರ್ಯರಾದ ಜಗದೀಶ್  ಮುತ್ತನಾಳ, ದ್ರಾಕ್ಷಾಯಣಿ ಮಠಮತಿ ಇದ್ದರು.

Related posts: