ಗೋಕಾಕ:ದಿ. 29 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ : ಲೊಕೇಶಪ್ಪ
ದಿ. 29 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ : ಲೊಕೇಶಪ್ಪ
ಗೋಕಾಕ ಅ 3: ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ಅಭಿವೃದ್ದಿಗೆ ಪೂರಕವಾಗುವ ನಿಟ್ಟಿನಲ್ಲಿ ಡಿ.ವಾಯ್.ಉಪ್ಪಾರ ಪ್ರತಿಷ್ಠಾನದ ಮೂಲಕ ಉಪ್ಪಾರ ಸಮುದಾಯದ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿ. 29 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನ ಕಾರ್ಯದರ್ಶಿ ಲೊಕೇಶಪ್ಪ ಹೇಳಿದರು.
ಸೋಮವಾರದಂದು ಸಂಜೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲಾ ಉಪ್ಪಾರ ಸಂಘದ ಸಹಕಾರದಲ್ಲಿ ದಿ. 29 ರಂದು ಹುಬ್ಬಳ್ಳಿ ಕೆಎಸ್ಆರ್ಟಿಸಿ ಸಮುದಾಯ ಭವನದಲ್ಲಿ ಮುಂಜಾನೆ 9 ಗಂಟೆಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿನ ಯಾಂತ್ರಿಕೃತ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಬರುವ ಸಮಸ್ಯೆಗಳು, ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕುರಿತು ನಮ್ಮ ಪ್ರತಿಷ್ಠಾನದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಈಗಾಗಲೇ ಹಮ್ಮಿಕೊಂಡು ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
2016-17 ಸಾಲಿನಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 200ಕ್ಕೂ ಹೆಚ್ಚು ಪ್ರತಿಭೆಗಳಿಗೆ ನಗದು ಪುರಸ್ಕಾರದೊಂದಿಗೆ ಸತ್ಕರಿಸಲಾಗುವುದು. ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಅ. 10ರ ಒಳಗಾಗಿ ಆನ್ಲೈನ್ www.dyuppar.com ಹಾಗೂ dyupparfoundation@gmail.com ಮೂಲಕ ತಮ್ಮ ಅರ್ಜಿಗಳನ್ನು ಅಪ್ಲೋಡ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ. 7676760255 ಸಂಪರ್ಕಿಸಬೇಕೆಂದು ವಿನಂತಿಸಿದರು.
ಪದವಿ ಪರೀಕ್ಷೆಯಲ್ಲಿ ತೆರ್ಗೆಡೆಯಾದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು, ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉಚಿತವಾಗಿ ವಸತಿ ಮತ್ತು ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಬಿಇಓ ಉಮಾದೇವಿ ಬಸ್ಸಾಪೂರೆ, ಧಾರವಾಡ ಜಿಲ್ಲಾಧ್ಯಕ್ಷ ಈಶ್ವರ ಶಿರಕೋಳ, ಹಣಮಂತಪ್ಪ ಉಪ್ಪಾರ, ಎಪಿಎಮ್ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಉಪ್ಪಾರ ಸಂಘದ ಗ್ರಾಮೀಣ ಹಾಗೂ ನಗರ ಘಟಕ ಅಧ್ಯಕ್ಷ ರಾಮಣ್ಣ ತೋಳಿ, ರಾಮಸಿದ್ದ ಖಾನಪ್ಪನವರ ಹಿರಿಯರಾದ ಬಿ.ಆರ್.ಕೊಪ್ಪ, ಭೀಮಪ್ಪ ತೋಳಿ, ಮುಖಂಡರಾದ ಮಹಾದೇವ ಸಾಗರ, ಸಂತೋಷ ರೆಡ್ಡಿ, ವಿರುಪಾಕ್ಷ ಕಟ್ಟಿಮನಿ, ವಾಸುದೇವ ಸವತಿಕಾಯಿ, ಪರಸಪ್ಪ ಚೂನನ್ನವರ, ಮಾರುತಿ ಜಡಿನವರ, ಮಾಯಪ್ಪ ತಹಶೀಲದಾರ, ಯಲ್ಲಪ್ಪ ಹೆಜ್ಜೆಗಾರ, ಶಂಕರ ಧರೆನ್ನವರ, ಭರಮಣ್ಣ ಉಪ್ಪಾರ, ಬಿ.ಬಿ.ಹುಳ್ಳಿ , ಮಲ್ಲಪಾ ದಾಸಪ್ಪಗೋಳ ಸೇರಿದಂತೆ ಅನೇಕರು ಇದ್ದರು.
ವಿಷ್ಣು ಲಾತೂರ ಸ್ವಾಗತಿಸಿದರು, ಅರುಣ ಸವತಿಕಾಯಿ ವಂದಿಸಿದರು.