ಖಾನಾಪುರ: ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ
ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ
ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಕಾಲಿಕವಾಗಿ ಸುರಿದ ಮಳೆ, ಗಾಳಿ ರಭಸಕ್ಕೆ ಬೀಡಿ ಬಸ್ ನಿಲ್ದಾಣನಲ್ಲಿ ಪಾನಶಾಪ ಅಂಗಡಿಯ ಮೇಲೆ ಆಲದ ಮರ ಉರುಳಿ ಬಿದ್ದಿದ್ದರಿಂದ ಇಫ್ತಾರ ಮಹ್ಮದರಫೀಕ ಕಿತ್ತೂರ (22) ಎಂಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನ ತಂದೆಯಾದ ಮಹ್ಮದರಫೀಕ ಕಿತ್ತೂರ (54) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೊತೆಗೆ ಮರದ ಕೆಳಗೆ ನಿಲುಗಡೆಯಾದ 2 ಕ್ರೂಸರ್ ವಾಹನ, 9 ಮೋಟರ ಸೈಕಲ್, ಒಂದು ಚಪ್ಪಲ ಅಂಗಡಿ, 2 ಹಣ್ಣಿನ ಅಂಗಡಿ ಹಾಗೂ 1 ಬೇಕರಿ ಜಖಮಗೊಂಡಿವೆ.
ವಿಷಯ ತಿಳಿಯುತ್ತಿದ್ದಂತೆ ಖಾನಾಪೂರ ಶಾಸಕ ಅರವಿಂದ ಪಾಟೀಲ ಹಾಗೂ ತಹಶೀಲದಾರ ಶಿವಾನಂದ ಉಳ್ಳೇಗಡ್ಡೆ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ