ಗೋಕಾಕ:ಸಂಘ ಸಂಸ್ಥೆಗಳು ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿ : ಅನುಪಾ ಕೌಶಿಕ್
ಸಂಘ ಸಂಸ್ಥೆಗಳು ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿ : ಅನುಪಾ ಕೌಶಿಕ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 2 :
ಮಕ್ಕಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಪ್ರತಿಭಾವಂತರಾಗುತ್ತಾರೆಂದು ಇಲ್ಲಿಯ ಕೆಎಲ್ಇ ಶಾಲೆಯ ಆಡಳಿತಾಧಿಕಾರಿ ಅನುಪಾ ಕೌಶಿಕ್ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಶಾಲೆಯ ಆವರಣದಲ್ಲಿ ಜೆಸಿಐ ಸಂಸ್ಥೆಯ ಜೂನಿಯರ್ ಜೆಸಿ ಅವರು ಆಯೋಜಿಸಿದ್ದ ಟ್ಯಾಲೈಂಟ್ ಆಫ್ ಇಂಡಿಯಾ ಆನಲೈನ್ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಎಲ್ಲ ಮಕ್ಕಳಲ್ಲೂ ಉತ್ತಮ ಪ್ರತಿಭೆಗಳಿದ್ದು, ಪಾಲಕರು, ಶಿಕ್ಷಕರು ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಂಘ ಸಂಸ್ಥೆಗಳು ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಸಹಕಾರ ನೀಡಬೇಕು. ಮಕ್ಕಳು ಸೋಲು ಗೆಲುವಿಗೆ ಮಹತ್ವ ನೀಡದೆ ಇಂದಿನ ಸೋಲೆ ಮುಂದಿನ ಗೆಲುವಿನ ಮೆಟ್ಟಿಲುಗಳೆಂದು ತಿಳಿದು ಪಾಲ್ಗೊಂಡು ಸಾಧಕರಾಗಿ ಕೀರ್ತಿ ವಂತರಾಗಿರಿ ಎಂದು ಹಾರೈಸಿದರು.
ಈ ಸ್ವರ್ಧೆಯಲ್ಲಿ ಖುಷಿ ಪವಾರ ಪ್ರಥಮ , ಶ್ರೀಲಕ್ಷ್ಮೀ ಗಾಯಧ ದ್ವಿತೀಯ, ರಾಘವೇಂದ್ರ ಖಾನಪ್ಪನ್ನವರ ತೃತೀಯ ಸ್ಥಾನ ಪಡೆದು ಅತಿಥಿಗಳಿಂದ ಬಹುಮಾನ ಸ್ವೀಕರಿಸಿದರು.
ವೇದಿಕೆಯ ಮೇಲೆ ಕೆಎಲ್ಇ ಶಾಲೆಯ ಪ್ರಾಚಾರ್ಯ ಚಂದ್ರಾಣಿ ಭಟ್ಟಾಚಾರ್ಜಿ, ನಿರ್ಣಾಯಕರಾದ ಸಾಜೀದಾ ಬಿಜಾಪೂರೆ, ರಾಜೇಶ್ವರಿ ಆಲತಗಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಕಡೆವಾಡಿ, ನಿಕಟಪೂರ್ವ ಅಧ್ಯಕ್ಷರಾದ ರಜನಿಕಾಂತ್ ಮಾಳೋದೆ, ವಿಷ್ಣು ಲಾತೂರ, ಕಾರ್ಯದರ್ಶಿ ಶೇಖರ್ ಉಳ್ಳಾಗಡ್ಡಿ, ಜೂನಿಯರ್ ಜೆಸಿ ಅಧ್ಯಕ್ಷ ಸುವೀರ ತುಪ್ಪದ , ನಿಕಟಪೂರ್ವ ಅಧ್ಯಕ್ಷ ಸರ್ವೇಶ ಸವದಿ ಇದ್ದರು.