ಗೋಕಾಕ : ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 24 :
ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ನಗರದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಕಾರ್ಯಾಲಯದಲ್ಲಿ ಶನಿವಾರ ಸರಳವಾಗಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಪ್ತಭುದೇವ ಹಡಪದ ಅವರು ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದ ಗೌರವಾಧ್ಯಕ್ಷ ಶಿವಾನಂದ ಹಡಪದ ಮಾತನಾಡಿ.ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಶರಣರ ವಚನಗಳಿಗೆ ಮುದ್ರೆ ಒತ್ತುತ್ತಿದ್ದರಲ್ಲದೆ, ಪ್ರೋತ್ಸಾಹ ನೀಡುತ್ತಿದ್ದರು. ಶ್ರೇಷ್ಠ ಶರಣಾಗಿದ್ದ ಅವರು ಮೂಡನಂಬಿಕೆ ಹೋಗಲಾಡಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ತ ವಹಿಸಿದ್ದರು. ಅಸಮಾನತೆ ಹೋಗಲಾಡಿಸುವಲ್ಲಿ ಹೋರಾಡಿದ್ದರು ಎಂದು ಅವರ ಸೇವೆಯನ್ಬು ಸ್ಮರಿಸಿಕೊಂಡರು. ಇವರ ಸಾಮಾಜಿಕ ಸೇವೆಗೆ ಬಸವಣ್ಣನವರು ಅಪ್ಪಣ್ಣನವರಿಗೆ ನಿಜಸುಖಿ ಬಿರುದು ನೀಡಿದ್ದರು ಎಂದರು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಾದ ಲಕ್ಷ್ಮಣ ಹಡಪದ, ಕೆ.ಎಂ. ಶಶಿಧರ, ಸಾವಿತ್ರಿ ಹಡಪದ, ಬಸವರಾಜ ನಾವಿ, ಬಸವರಾಜ ಹೊರಗಿನಮನಿ, ಸೋಮಲಿಂಗ ಹಳಿಜೋಳ ಇತರರು ಪಾಲ್ಗೊಂಡಿದ್ದರು.