ಗೋಕಾಕ:ಸೋಮವಾರ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಮುಂದೂಡಿಕೆ : ಬಿಇಓ ಬಳಗಾರ
ಸೋಮವಾರ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ಮುಂದೂಡಿಕೆ : ಬಿಇಓ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 26 :
ರಾಜ್ಯ ರೈತ ಸಂಘ ಕರೆ ನೀಡಿರುವ ಬಂದ ಹಿನ್ನೆಲೆಯಲ್ಲಿ ಸೋಮವಾರ ದಿನಾಂಕ 28/09/2020 ರಂದು ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ ಪೂಕರ ಪರೀಕ್ಷೆಯನ್ನು ಮಂಗಳವಾರದಂದು ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ನಿರ್ದೇಶನ ನೀಡಿದ್ದು , ಸೋಮವಾರ ನಡೆಯುವ ವಿಜ್ಞಾನ ವಿಷಯ ಪರೀಕ್ಷೆಯನ್ನು ಮಂಗಳವಾರದಂದು ನಡೆಸಲಾಗುವದು ಎಂದು ಬಿಇಓ ಬಳಗಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು
ಮಾನ್ಯ ನಿರ್ದೇಶಕರು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಅವರ ಆದೇಶದ ಮೇರೆಗೆ ಸೋಮವಾರ ದಿನಾಂಕ 28-9-2020 ರಂದು ನಡೆಯಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ವಿಜ್ಞಾನ ವಿಷಯ ಮುಂದೂಡಲಾಗಿದೆ.ಬದಲಾಗಿ 29-9-2020 ರಂದು ನಡೆಯಲಿದೆ.ಕಾರಣ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಗಮನಕ್ಕೆ ದೂರವಾಣಿ ಮೂಲಕ ತಂದು ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆಗೆ ಹಾಜರಾಗುವಂತೆ ಗೋಕಾಕ ಶೈಕ್ಷಣಿಕ ವಲಯದ ಎಲ್ಲ ಸರಕಾರಿ ಅನುದಾನಿತ ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ
ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ .