ಗೋಕಾಕ:ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ : ಗೋಕಾಕದಲ್ಲಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ : ಗೋಕಾಕದಲ್ಲಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 31 :
ಮಹಾರಾಷ್ಟ್ರದ ಕೋಲ್ಹಾಪೂರದಲ್ಲಿ ನಾಡ ವಿರೋಧಿ ಶಿವಸೇನೆ ಕನ್ನಡ ಧ್ವಜಕ್ಕೆ ಬೆಂಕಿ ಹಾಕಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು
ಮಂಗಳವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಂಘಟನೆಯ ಕಾರ್ತಕರ್ತರು ನಾಡ ವಿರೋಧಿ ಶಿವಸೇನೆ ಸಂಘಟನೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು
ನಂತರ ಮಿನಿ ವಿಧಾನಸೌದದ ವರಗೆ ಮೆರವಣಿಗೆ ನಡಿಸಿದ ಕಾರ್ಯಕರ್ತರು ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರುಗಳಾದ ಮಲ್ಲಿಕಜಾನ ತಳವಾರ , ಅಜೀಜ ಮೋಕಾಶಿ, ಮೌಲಾ ಪುಲ್ತಾಂಬೆ , ಗುಲಾಬ ಫುಲ್ತಾಂಬೆ, ಕರೆಪ್ಪ ಹೊಸಮನಿ,ಮಹಿಬೂಬ್ ತಲವಾರ,ಇಬ್ರಾಹಿಂ ದೇವಡಿ,ಪರಶುರಾಮ್ ,ಬಾಳೇಶ್ ಪೂಜೇರಿ
ಮುಬಾರಕ್, ಯಾಸೀನ್ ಅರಬ್, ಶಾರುಖ್ ಸೇರಿದಂತೆ ಇತರರು ಇದ್ದರು