ಗೋಕಾಕ:ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ
ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ್ರತಿಭಟಿಸುವಂತೆ ಕರವೇ ಎಚ್ಚರಿಕೆ
ಗೋಕಾಕ ಅ 31: ನಗರದ ಕೇಂದ್ರ ಬಸ್ ನಿಲ್ದಾಣ ಪಕ್ಕ ವಿರುವ ಆಟೋ ನಿಲ್ದಾಣದಲ್ಲಿ ಅಳವಡಿಸಿದ ಸತೀಶ ಜಾರಕಿಹೊಳಿ ಅವರ ಭಾವ ಚಿತ್ರಕ್ಕೆ ಮಸಿ ಬಳಿದ ಕೀಡಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಆಟೋ ಚಾಲಕರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿ ಡಿವಾಯ್ಎಸಪಿ ವೀರಭದ್ರಯ್ಯ ಅವರ ಮುಖಾಂತರ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಗುರುವಾರ ಮುಂಜಾನೆ ಡಿವಾಯ್ಎಸಪಿ ಕಛೇರಿ ಎದುರು ಸೇರಿದ ಕಾರ್ಯಕರ್ತರು ಭಾವಚಿತ್ರಕ್ಕೆ ಮಸಿ ಬಳೆದ ದುಷ್ಕರ್ಮಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಸೂಮಾರು ಒಂದು ಘಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು
ಕಳೆದ ಹಲವು ದಿನಗಳಿಂದ ನಗರದ ಹೊಸ ಬಸ ನಿಲ್ದಾಣದ ಹೊರಭಾಗದಲ್ಲಿ ಎಚ್.ಕೆ.ಬಿ.ಎನ್ ಎಂಬ ಹೆಸರಿನ ಆಟೋ ನಿಲ್ದಾಣಕ್ಕೆ ಸತೀಶ ಅವರ ಅಭಿಮಾನಿಗಳು ಸತೀಶ ಜಾರಕಿಹೊಳಿ ಅವರ ಭಾವಚಿತ್ರ ವಿರುವ ನಾಮಫಲಕವನ್ನು ದೇಣಿಗೆ ನೀಡಿದ್ದರು
ಬುಧವಾರ ತಡರಾತ್ರಿ ಕೆಲ ಕೀಡಗೇಡಿಗಳು ಶಾಸಕ ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಅವಮಾನಗೋಳಿಸಿದ್ದಾರೆ ಇದು ಅವರ ಅಪಾರ ಅಭಿಮಾನ ಬಳಗಕ್ಕೆ ತುಂಬಾ ನೋವನ್ನುಂಟು ಮಾಡಿದೆ .
ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಬರುವ 48 ಘಂಟೆಗಳಲ್ಲಿ ಈ ದುಷ್ಟ ಕೃತ್ಯವೇಸಗಿದ ಕೀಡಗೇಡಿಗಳನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಮಸ್ತ ಸತೀಶ ಜಾರಕಿಹೊಳಿ ಅವರ ಅಭಿಮಾನ ಭಳಗದ ಪರವಾಗಿ ಕರವೇ ಕಾರ್ಯಕರ್ತರು ಮನವಿಯಲ್ಲಿ ಆಗ್ರಹಿಸಿದ್ದಾರೆ
ಇದಕ್ಕೆ ತಪ್ಪಿದಲ್ಲಿ ಇಡೀ ಗೋಕಾಕ ನಗರವನ್ನು ಸಂಪೂರ್ಣ ಬಂದ ಮಾಡಿ ಉಗ್ರ ರೂಪದಲ್ಲಿ ಪ್ರತಿಭಟನೆ ಮಾಡಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ವೇದಿಕೆ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಉಪಾಧ್ಯಕ್ಷ ದೀಪಕ ಹಂಜಿ , ರಿಯಾಜ ಚೌಗಲಾ , ಛಾಯಾಗ್ರಾಹಕರ ಸಂಘಟನೆಯ ಲಕ್ಷ್ಮಣ ಯಮಕನಮರಡಿ , ಮಲ್ಲಿಕಾರ್ಜುನ ಕೆ.ಆರ್. , ಬಾಡಿಬಿಲ್ಡಿಂಗ ಸಂಘಟನೆಯ ರಮೆಶ ಕಳ್ಳಿಮನಿ , ಆಟೋ ಚಾಲಕ ಸಂಘಟನೆಯ ಮೈನು ಪಾತ್ರಿ , ಗನಿ ನರೋ , ಶಬ್ಬೀರ ಮುಲ್ಲಾ , ಕೃಷ್ಣಾ ಖಾನಪ್ಪನವರ , ಶೇಟ್ಟೆಪ್ಪಾ ಗಾಡಿವಡ್ಡರ , ಬಸು ಗಾಡಿವಡ್ಡರ , ಕೆಂಪ್ಪಣಾ ಕಡಕೋಳ , ನಿಯಾಜ ಪಟೇಲ, ಮಲ್ಲಪಾ ತಲೇಪಗೋಳ , ಲಕ್ಕಪ್ಪಾ ನಂದಿ , ಸೇರಿದಂತೆ ಹಲವರು ಉಪಸ್ಥಿತರಿದ್ದರು