ಗೋಕಾಕ:ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ
ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುವ ಪಕ್ಷಕ್ಕೆ ಮಾತ್ರ ನಮ್ಮ ಬೆಂಬಲ : ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ
ಗೋಕಾಕ ನ 6: ಕೋಳಿ , ಕಬ್ಬಲಿಗ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ಪ್ರಮಾಣ ಮಾಡುವ ಪಕ್ಕಕ್ಕೆ ನಮ್ಮ ಸಮಾಜ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಲ್ಲಿದೆ ಎಂದು ಕೋಳಿ ಕಬ್ಬಲಿಗ ಯುವ ವೇದಿಕೆ ರಾಜ್ಯಧ್ಯಕ್ಷ ಶಿವಾಜಿ ಮೆಟಗಾರ ಹೇಳಿದರು
ಅವರು ಸೋಮವಾರದಂದು ಗೋಕಾಕ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕೋಳಿ ಸಮಾಜ ಭಾಂಧವರು ಹಮ್ಮಿಕೊಂಡಿದ್ದ ಚಿಂತನ ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ಕೋಳಿ ಸಮಾಜವನ್ನು ಕಳೆದ ಹಲವಾರು ವರ್ಷಗಳಿಂದ ರಾಜ್ಯವನ್ನು ಆಳಿದ ಸರಕಾರಗಳು ಕಡೆಗನಿಸುತ್ತಿವೆ ಸುಮಾರು 4 ದಶಕಗಳಿಂದಲೂ ನಮ್ಮ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ರಾಜಕೀಯ ಪಕ್ಷಗಳು ನಮ್ಮಗೆ ಮೋಸ ಮಾಡುತ್ತಿವೆ ಈ ಬಾರಿ ಇವರ ಆಟ ನಡೆಯಲು ಸಮಾಜ ಬಾಂಧವರು ಬಿಡುವುದಿಲ್ಲ ಮುಂಬರುವ ಚುನಾವಣೆಯಲ್ಲಿ ಕೋಳಿ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೆವೆಂದು ಪ್ರಾಮಾಣಿಕ ಭರವಸೆ ನೀಡಿವು ಪಕ್ಷಕ್ಕೆ ಬೆಂಬಲಿಸಲು ನಿರ್ಣಯಿಸಲಾಗಿದೆ
ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇರುವ ಸಮಾಜಕ್ಕೆ ಇನ್ನವರೆಗೂ ಯಾವದೇ ಮೀಸಲಾತಿಗಳು ದೊರೆಯದಿರುವುದು ಕೋಳಿ ಸಮಾಜದ ದುರ್ಧೈವ
ವಿಜಯಪುರ, ಕಲರ್ಬುಗಿ ಭಾಗಗಳಲ್ಲಿ ಕೋಳಿ ,ಕಬ್ಬಲಿಗ ಸಮಾಜ ಬಾಂಧವರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದರು ಸಹ ಯಾವ ಸರಕಾರಗಳು ಇತ್ತ ಗಮನ ಹರಿಸುತ್ತಿಲ್ಲಾ ತಕ್ಷಣ ಹಿತಂಹ ಪ್ರಕರಣಗಳನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೋಳಬೇಕೆಂದು ಮೆಟಗಾರ ಇದೇ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು
ಈ ಸಂದರ್ಭದಲ್ಲಿ ಹುಣಶ್ಯಾಳ ಪಿ.ಜಿ ತಾ.ಪಂ ಸದಸ್ಯ ಬಸವರಾಜ ಹುಕ್ಕೇರಿ , ಗಂಗಾಮಾತಾ ತಾಲೂಕಾಧ್ಯಕ್ಷ ಮುದಕ್ಕಪ್ಪ ತಳವಾರ , ಕಾಶೇಪ್ಪ ಕೋಳಿ , ಮಂಜು ಸುಂಕದ , ಲಕ್ಷ್ಮಣ ಯಮಕನಮರಡಿ , ವಿಜಯ ಗೋಣಿ , ರಾಮಚಂದ್ರ ಸುಕಂದ , ನ್ಯಾಯವಾದಿ ತಪಸಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು