RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಸಮಾಜ ಸೇವೆಯು ದೇವರ ಕಾರ್ಯ ಎಂದು ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದೆ : ಆನಂದ ಅರವಾರ

ಗೋಕಾಕ:ಸಮಾಜ ಸೇವೆಯು ದೇವರ ಕಾರ್ಯ ಎಂದು ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದೆ : ಆನಂದ ಅರವಾರ 

ಸಮಾಜ ಸೇವೆಯು ದೇವರ ಕಾರ್ಯ ಎಂದು ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದೆ : ಆನಂದ ಅರವಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 4 :

 

 

ಸಮಾಜ ಸೇವೆಯು ದೇವರ ಕಾರ್ಯ ಎಂದು ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದೆ ಎಂದು ಚಿಕ್ಕೋಡಿ ರೋಟರಿ ಸಂಸ್ಥೆಯ ಆನಂದ ಅರವಾರೆ ಹೇಳಿದರು
ಶನಿವಾರದಂದು ನಗರದ ರೋಟರಿ ರಕ್ತ ಬಂಢಾರ ಸಭಾಂಗಣದಲ್ಲಿ ಇಲ್ಲಿಯ ರೋಟರಿ ಮತ್ತು ಇನರ್ ವಿಲ್ ಸಂಸ್ಥೆಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹಸ್ತಾಂತರ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಾನು ಅನ್ನುವುದನ್ನು ನಮ್ಮದಾಗಿಸಿ ತಮ್ಮಲ್ಲಿರುವ ಕೌಶಲ್ಯತೆಯಿಂದ ಸಮಾಜ ಸೇವೆಯ ಮನೋಭಾವವನ್ನು ರೋಟರಿ ಸಂಸ್ಥೆ ಬೆಳೆಸುತ್ತದೆ. ವಿವಿಧತೆಗಳಲ್ಲಿ ಏಕತೆಯೊಂದಿಗೆ ಎಲ್ಲರೂ ಸಂಘಟಿತರಾಗಿ ಸಮಾಜಮುಖಿ ಕಾರ್ಯ ಮಾಡುವ ಅವಕಾಶವನ್ನು ಸಂಸ್ಥೆ ಕಲ್ಪಿಸಿ ಕೊಡುತ್ತದೆ. ಪರಸ್ಪರ ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿ ಅಧಿಕಾರಕ್ಕಿಂತ ಸೇವೆಯೇ ಮುಖ್ಯ ಎಂಬ ಸಂದೇಶವನ್ನು ನೀಡುತ್ತದೆ ಎಂದ ಅವರು ಇಲ್ಲಿಯ ಸಂಸ್ಥೆ ಪ್ರವಾಹದ ಸಂದರ್ಭದಲ್ಲಿ ಮಾಡಿದ ಮಾನವೀಯತೆಯ ಕಾರ್ಯವನ್ನು ಶ್ಲಾಘೀಸಿದರು.

ವೇದಿಕೆಯ ಮೇಲೆ ರೋಟರಿ ಸಂಸ್ಥೆಯ ಉಪ ಪ್ರಾಂತಪಾಲ ರಾಜು ಮೆಟ್ಟಗುಡ್ , ರೋಟರಿ ಸೇವಾ ಸಂಘಧ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳಿ , ಇಲ್ಲಿಯ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ವಿಶ್ವನಾಥ್ ಕಡಕೋಳ , ಕಾರ್ಯದರ್ಶಿ ಗಣೇಶ ವರದಾಯಿ, ಇನರ್ ವ್ಹಿಲ್ ಸಂಸ್ಥೆಯ ನೂತನ ಅಧ್ಯಕ್ಷೆ ರೂಪಾ ಮುನ್ನವಳ್ಳಿ , ಕಾರ್ಯದರ್ಶಿ ಜ್ಯೋತಿ ವರದಾಯಿ, ಹಿಂದಿನ ಪದಾಧಿಕಾರಿಗಳಾದ ಸೋಮಶೇಖರ್ ಮಗದುಮ, ಡಾ.ಉದಯ ಆಜರೆ , ವಿದ್ಯಾ ಮಗದುಮ ಇದ್ದರು

ಜಗದೀಶ ಚುನಮರಿ ಸ್ವಾಗತಿಸಿದರು. ಸತೀಶ ನಾಡಗೌಡಾ ನಿರೂಪಿಸಿದರು , ರಾಜು ಮುನ್ನೋಳ್ಳಿಮಠ ವಂದಿಸಿದರು.

Related posts: