ಗೋಕಾಕ:ಕೊರೋನಾ ವೈರಸ ಹರಡದಂತೆ ತಡೆಗಟ್ಟಲು ನಾವೆಲ್ಲರೂ ಒಂದಾಗಿ ಹೋರಾಡಬೇಕಾಗಿದೆ : ಸಿ.ಪಿ.ಐ ಗೋಪಾಲ ರಾಠೋಡ
ಕೊರೋನಾ ವೈರಸ ಹರಡದಂತೆ ತಡೆಗಟ್ಟಲು ನಾವೆಲ್ಲರೂ ಒಂದಾಗಿ ಹೋರಾಡಬೇಕಾಗಿದೆ : ಸಿ.ಪಿ.ಐ ಗೋಪಾಲ ರಾಠೋಡ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 21 :
ಕೊರೋನಾ ವೈರಸ ಹರಡದಂತೆ ತಡೆಗಟ್ಟಲು ನಾವೆಲ್ಲರೂ ಭಾರತಿಯರು ಒಂದೆ ಎಂಬ ಮಂತ್ರದೊಂದಿಗೆ ಸರಕಾರದ ಇಲಾಖೆಗಳ ಸಿಬ್ಬಂದಿಗಳೊಂದಿಗೆ , ಜನಪ್ರತಿನಿಧಿಗಳು ಸಾರ್ವಜನಿಕರು ಸಹಕರಿಸುವಂತೆ ಗೋಕಾಕ ಸಿ.ಪಿ.ಐ ಗೋಪಾಲ ರಾಠೋಡ ಹೇಳಿದರು
ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊರೋನಾ ವೈರಸ ಸೈನಿಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು
ನಗರದ ಪ್ರತಿವಾರ್ಡನಲ್ಲಿ ವಾರ್ಡ್ ಸದಸ್ಯರು ನೇತೃತ್ವದಲ್ಲಿ 5 ಜನರ ಕೊರೋನಾ ಸೈನಿಕರ ತಂಡ ರಚಿಸಲಾಗಿದೆ. ತಮ್ಮ ತಮ್ಮ ವಾರ್ಡಗಳಲ್ಲಿ ನಗರಸಭಾ ಸದಸ್ಯರೊಂದಿಗೆ ಜನರ ಸಮಸ್ಯೆಗಳಿಗೆ ಸ್ವಂದಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಬೇಕು. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗೆ ಜನರು ಸರಿಯಾಗಿ ಮಾಹಿತಿ ನೀಡಬೇಕು. ಕಿರಾಣ ಅಂಗಡಿ , ಕಾಯಿಪಲ್ಲೆ ಸೇರಿದಂತೆ ಇತರ ಕಡೆಗಳಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಆಶಾ ಕಾರ್ಯಕರ್ತರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು.
ತಾಲೂಕಾ ಇಲ್ಲಿಯವರೆಗೆ ಸುರಕ್ಷಿತವಾಗಿದೆ ನಿಮ್ಮೆಲ್ಲರ ಸಹಕಾರದಿಂದ ಮುಂದೆಯೂ ಕೊರೋನಾ ವೈರಸ್ ನಮ್ಮ ತಾಲೂಕಿಗೆ ಬರದಂತೆ ನೋಡಿಕೊಳ್ಳೋಣ ಎಂದು ಹೇಳಿದರು
ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೊತವಾಲ ಮತ್ತು ನಗರಸಭೆ ಪೌರಾಯುಕ್ತ ಮಾತನಾಡಿ ಕೊರೋನಾ ವೈರಸ್ ತಡೆಗಟ್ಟಲು ಸರಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಕರೆ ನೀಡಿದರು
ಇದೇ ಸಂದರ್ಭದಲ್ಲಿ ಕೊರೋನಾ ಸೈನಿಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಎಸ್.ಐ ಅಮ್ಮಿನಬಾಂವಿ , ಹಿರಿಯ ಪತ್ರಕರ್ತ ಎಸ್.ಬಿ.ಧಾರವಾಡಕರ ಸೇರಿದಂತೆ ಎಲ್ಲಾ ನರಗಸಭಾ ಸದಸ್ಯರು ಇದ್ದರು