ಗೋಕಾಕ:ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರಿಂದ ಪರಿಹಾರ ಚೆಕ್ ವಿತರಣೆ

ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರಿಂದ ಪರಿಹಾರ ಚೆಕ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 25 :
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕಲ್ಯಾಣ ಸಂಘದಿಂದ ಇತ್ತಿಚೆಗೆ ಮೃತರಾದ ಸಂಘದ ಸದಸ್ಯರ ಕುಟುಂಬಕ್ಕೆ ತಲಾ 10ಸಾವಿರ ರೂಗಳ ಪರಿಹಾರಧನದ ಚೆಕ್ಗಳನ್ನು ಕರ್ನಾಟಕ ಹಾಲು ಮಹಾಮಂಡಳ ಮತ್ತು ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಶುಕ್ರವಾರದಂದು ನಗರದ ಅವರ ಕಾರ್ಯಾಲಯದಲ್ಲಿ ವಿತರಿಸಿದರು.
ತಾಲೂಕಿನ ಸಾವಳಗಿ ಗ್ರಾಮದ ದುಂಡವ್ವ ಶೀಗಿಹೊಳಿ, ನಾಗತೆವ್ವ ಮೇಲ್ಮಟ್ಟಿ, ಸಾಹೇಬಿ ನದಾಫ, ಶಿಂದಿಕುರಬೇಟ ಗ್ರಾಮದ ಹಣಮಂತ ಮಲಕನ್ನವರ ಮೃತರಾದ ಹಿನ್ನೆಲಯಲ್ಲಿ ಅವರ ಕುಟುಂಬ ಸದಸ್ಯರಿಗೆ ಚೆಕ್ಕ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಎಮ್ಎಫ್ ಉಪಕೇಂದ್ರ ಗೋಕಾಕದ ವಿಸ್ತರಣಾಧಿಕಾರಿ ಎಸ್.ಬಿ.ಕರಬನ್ನವರ ಇದ್ದರು.