ಗೋಕಾಕ:ನಿವೃತ್ತ ಪ್ರೋ ಡಾ. ಎ.ವಾಯ್.ಪಂಗಣ್ಣವರ ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿ

ನಿವೃತ್ತ ಪ್ರೋ ಡಾ. ಎ.ವಾಯ್.ಪಂಗಣ್ಣವರ ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿ
ಗೋಕಾಕ ಜ 25 : ಇಲ್ಲಿಯ ನಿವೃತ್ತ ಪ್ರೋ ಡಾ. ಎ.ವಾಯ್.ಪಂಗಣ್ಣವರ ಅವರನ್ನು ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರದಿಂದ ಆಮಂತ್ರಿಸಲಾಗಿದೆ.
ಬುಡುಕಟ್ಟು ಜನಾಂಗದ ಸಂಶೋದನಾ ಸಂಸ್ಥೆ ಶಿಪಾರಸ್ಸಿನ ಮೇರೆಗೆ ಈ ಆಯ್ಕೆ ಮಾಡಲಾಗಿದ್ದು, ಬುಡಕಟ್ಟು ಜನಾಂಗದ ಸಂಶೋದನೆಯಲ್ಲಿ ಡಾ|| ಪಂಗಣ್ಣವರ ಅವರು ಸಲ್ಲಿಸಿದ ಸೇವೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಪರಿಗಣಿಸಿ ಆಯ್ಕೆಯನ್ನು ಮಾಡಲಾಗಿದೆ.
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವ್ಯಕ್ತಿಗಳಾಗಿದ್ದಾರೆ.