RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಬಿಜೆಪಿ ಬೆಳೆಯಲು ಪಂ. ದೀನದಯಾಳ ಉಪಾಧ್ಯಾಯರ ಕೊಡುಗೆ ಅನನ್ಯ : ಎಂ.ಆರ್. ಭೋವಿ

ಗೋಕಾಕ:ಬಿಜೆಪಿ ಬೆಳೆಯಲು ಪಂ. ದೀನದಯಾಳ ಉಪಾಧ್ಯಾಯರ ಕೊಡುಗೆ ಅನನ್ಯ : ಎಂ.ಆರ್. ಭೋವಿ 

ಬಿಜೆಪಿ ಬೆಳೆಯಲು ಪಂ. ದೀನದಯಾಳ ಉಪಾಧ್ಯಾಯರ ಕೊಡುಗೆ ಅನನ್ಯ : ಎಂ.ಆರ್. ಭೋವಿ

 

 

ನಮ್ಮ ಬೆಳಗಾವಿ ಇ- ವಾರ್ತೆ ಗೋಕಾಕ ಸೆ 25 :

 

 

ಬಿಜೆಪಿ ದೇಶಾದ್ಯಂತ ಹೆಮ್ಮರವಾಗಿ ಬೆಳೆಯಲು ಪಂ. ದೀನದಯಾಳ ಉಪಾಧ್ಯಾಯರ ಕೊಡುಗೆ ಅನನ್ಯವಾಗಿದೆ ಎಂದು ಪ್ರಭಾಶುಗರ್ ನಿರ್ದೇಶಕ ಎಂ.ಆರ್. ಭೋವಿ ಹೇಳಿದರು.
ಬುಧವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪಂ. ದೀನದಯಾಳ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಪಾಧ್ಯಾಯ ಅವರು ಈ ದೇಶದಲ್ಲಿ ಯಾರೂ ಮರೆಯದ ಅಪ್ರತಿಮ ದೇಶ ಸೇವಕರಾಗಿದ್ದರೆಂದು ಪ್ರಶಂಸಿಸಿದರು.
ಪಂ.ದೀನದಯಾಳರು ಸಾಕಷ್ಟು ಮೇಧಾವಿಯಾಗಿದ್ದರೂ ಅವರೆಂದೂ ನಾಯಕರಾಗಲಿಲ್ಲ. ತಮ್ಮ ಅಗಾಧ ಸಂಘಟನಾ ಶಕ್ತಿಯಿಂದ ತೆರೆ ಮರೆಯಲ್ಲಿ ನಿಂತು ಸಾವಿರಾರು ನಿಸ್ವಾರ್ಥ ಸೇನಾನಿಗಳನ್ನು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
ಪಂ. ಉಪಾಧ್ಯಾಯರು ರಾಷ್ಟ್ರ ಕಂಡ ಅಪ್ರತೀಮ ಸಾಧಕರಾಗಿದ್ದರು : ನಾಗಪ್ಪ ಶೇಖರಗೋಳ
ಪಂ.ದೀನದಯಾಳ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಯುವ ಧುರೀಣ ನಾಗಪ್ಪ ಶೇಖರಗೋಳ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ವಂಚಿತ ವ್ಯಕ್ತಿಗೆ ಅವಕಾಶಗಳು ದೊರಕಬೇಕು. ಅವನ ಬದುಕು ಹಸನಾಗಬೇಕು ಎಂಬ ಧ್ಯೇಯೋದ್ಧೇಶವನ್ನು ಪಂ. ಉಪಾಧ್ಯಾಯರು ಹೊಂದಿದ್ದರು. ಪಂ. ದೀನದಯಾಳ ಉಪಾಧ್ಯಾಯರು ರಾಷ್ಟ್ರ ಕಂಡ ಅಪ್ರತೀಮ ಮೇಧಾವಿಯಾಗಿದ್ದರು. ಅವರು ಬಿತ್ತಿದ ಬೀಜದ ಪ್ರತಿಫಲವೇ ಭಾರತೀಯ ಜನತಾ ಪಾರ್ಟಿ. ದೇಶದ ಉದ್ದಗಲಕ್ಕೂ ಹೆಮ್ಮರವಾಗಿ ಹರಡಿ ದೇಶದ ನಾನಾ ಭಾಗಗಳಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ಪಂ. ಉಪಾಧ್ಯಾಯರ ಸ್ಪೂರ್ತಿಯೇ ಕಾರಣವಾಗಿದೆ. ಜಗತ್ತಿನಲ್ಲಿಯೇ ಬಿಜೆಪಿ ಅತ್ಯಂತ ಪ್ರಭಲ ಪಕ್ಷವಾಗಿ ಹೊರಹೊಮ್ಮಲು ಪಂ. ದೀನದಯಾಳ ಉಪಾಧ್ಯಾಯರು ಹಾಕಿಕೊಟ್ಟ ಮಾರ್ಗವೇ ಕಾರಣವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ ಕುದರಿ, ರಾಮಣ್ಣಾ ಬೆಣ್ಣಿ, ಸತ್ತೆಪ್ಪ ಬಬಲಿ, ಕಲಗೌಡ ನಾಯಿಕ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts: