ಗೋಕಾಕ:ಪ್ರವಾಹದಿಂದ ಹಾನಿಗೊಳಗಾದ ವ್ಯಾಪಾಸ್ಥರಿಗೆ ಪರಿಹಾರ ದೊರಕಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಒತ್ತಾಯ

ಪ್ರವಾಹದಿಂದ ಹಾನಿಗೊಳಗಾದ ವ್ಯಾಪಾಸ್ಥರಿಗೆ ಪರಿಹಾರ ದೊರಕಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಒತ್ತಾಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 24 :
ನೆರೆ ಹಾವಳಿಯಿಂದ ಹಾನಿಗೆ ಒಳಗಾದ ನಗರದ ವ್ಯಾಪಾರಸ್ಥರು ಹಾಗೂ ವೃತ್ತಪರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಇಲ್ಲಿಯ ಜೆಸಿಐ, ರೋಟರಿ, ಲೈನ್ಸ್ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಮೆರವಣಿಗೆ ನಡೆಯಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು
ಶನಿವಾರದಂದು ನಗರದ ನಾಕಾದಿಂದ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು
ಹಿಂದೆಂದು ಕಂಡರಿಯದಷ್ಟು ಪ್ರವಾಹ ಬಂದು ಅಲೋಲ,ಕಲ್ಲೋಲವಾಗಿದೆ ಸರಕಾರ ನೆರೆ ಹಾವಳಿಗೆ ಒಳಗಾದ ರೈತರಿಗೆ, ಮನೆ ಕಳೆದುಕೊಂಡವರಿಗೆ , ಧನ ಕರು ಕಳೆದುಕೊಂಡವರಿಗೆ ಮತ್ತು ಜೀವಹಾನಿ ಆದವರಿಗೆ ಪರಿಹಾರ ಧನ ಘೋಷಿಸಿದೆ ಆದರೆ ಹಾನಿಗೆ ಒಳಗಾದ ವ್ಯಾಪಾರಸ್ಥರು ಹಾಗೂ ವೃತ್ತಿಪರರಿಗೆ ಯಾವುದೆ ಪರಿಹಾರ ಧನ ಘೋಷಣೆ ಮಾಡಿರುದಿಲ್ಲ .ನಗರದಲ್ಲಿ ಪ್ರವಾಹದಿಂದ ವ್ಯಾಪಾರಿ ವಸ್ತುಗಳು ಸಂಪೂರ್ಣವಾಗಿ ಮುಳುಗಿ ಸುಮಾರು100.ಕೋಟಿಗೂ ಹೆಚ್ಚು ಹಾನಿ ಸಂಭವಿಸಿರುತ್ತದೆ. ಸರಕಾರ ಹಿಂತಹವರನ್ನು ಸಹ ಗುರಿತಿಸಿ ಆದಷ್ಟು ಬೇಗ ಪರಿಹಾರ ನೀಡುವಂತೆ ಒತ್ತಾಯಿಸಲಾಯಿತ್ತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳಾದ ವಿಷ್ಣು ಲಾತೂರ, ಮಹಾವೀರ ಖಾರೇಪಠಾಣ,ಸೋಮಶೇಖರ್ ಮಗದುಮ್ಮ, ವಿಶ್ವನಾಥ್ ಬೆಲ್ಲದ, ಡಾ.ಅಶೋಕ ಪಾಟೀಲ, ಅಶೋಕ ಪೂಜಾರಿ, ಜಯಾನಂದ ಮುನ್ನೋಳಿ , ಬಸವರಾಜ ಖಾನಪ್ಪನವರ, ಮಹಾಂತೇಶ ತಾವಝಶಿ ,ಯಶೋಧಾ ಬಿರಡಿ, ಸಂತೋಷ ಕಂಡ್ರಿ , ಪ್ರಕಾಶ ಕೋಲಾರ ಸೇರಿದಂತೆ ಅನೇಕರು ಇದ್ದರು.
ಸಂತ್ರಸ್ತರಿಗೆ ಸಹಾಯ ಹಸ್ತ : ನೆರೆ ಸಂತ್ರಸ್ತರಿಗೆ ಆಶಾಕಿರಣ ಕಲಾ ಟ್ರಸ್ಟ್ ಹಾಗೂ ಕಸಾಪಾ ತಾಲೂಕು ಘಟಕದ ವತಿಯಿಂದ ನಗರದ ಜ್ಞಾನ ಮಂದಿರದಲ್ಲಿ ಜೀವನಾವಶಕ ವಸ್ತುಗಳನ್ನು ಶನಿವಾರದಂದು ವಿತರಿಸಲಾಯಿತು
ಈ ಸಂದರ್ಭದಲ್ಲಿ ಮಾಲತಿಶ್ರೀ ,ಅಶೋಕ ಪೂಜಾರಿ, ಮಹಾಂತೇಶ ತಾವಂಶಿ, ರಜನಿ ಜಿರಗ್ಯಾಳ, ಸಂಗೀತ ಬನ್ನೂರ,ಪ್ರಕಾಶ ಕೋಲಾರ, ಜಯಾನಂದ ಮಾದರ, ಶೈಲಾ ಕೋಕ್ಕರಿ,ಸುಮಾ ಮದಿಹಳ್ಳಿ,ರಾಜೇಶ್ವರಿ ಹಿರೇಮಠ ಇದ್ದರು