ಘಟಪ್ರಭಾ:ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ

ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 30 :
ಸಮೀಪದ ಧುಪದಾಳ ಗ್ರಾಮದಲ್ಲಿ ರಜಪೂತ ಸೇವಾ ಸಮೀತಿಯ ಆಶ್ರಯದಲ್ಲಿ ಶ್ರೀ ಮಹಾರಾಣಾ ಪ್ರತಾಪಸಿಂಹರ 479ನೇ ಜಯಂತಿಯನ್ನು ಭಾನುವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಂಜಾನೆ 10 ಗಂಟೆಗೆ ಶ್ರೀ ಕರ್ಪೂರಮಠ ಸ್ವಾಮಿಗಳು ರಾಣಾಪ್ರತಾಪಸಿಂಹÀ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ರಜಪೂತ ಸಮಾಜದ ಹಿರಿಯರಾದ ಗೋವಿಂದಸಿಂಗ ಬೀ ರಜಪೂತ ಹಾಗೂ ಶ್ರೀಮತಿ ಶಾಂತಾಬಾಯಿ ಸು ರಜಪೂತ ಇವರನ್ನು ಸಮಾಜದಿಂದ ಸತ್ಕರಿಸಲಾಯಿತು. ನಂತರ ಬೈಕ ರ್ಯಾಲಿಯು ಧುಪದಾಳ ಗ್ರಾಮದ ಮಹಾರಾಜಾ ರಾಣಾಪ್ರತಾಪಸಿಂಹÀರ ವೃತ್ತದಿಂದ ಹೊರಟು ಘಟಪ್ರಭಾ ಮೃತ್ಯುಂಜಯ ವೃತ್ತಕ್ಕೆ ಹೋಗಿ ಧುಪದಾಳ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸ್ವಸ್ಥಾನಕ್ಕೆ ಮರಳಿತು.
ಸಂಜೆ 4 ಗಂಟೆಗೆ ಶ್ರೀ ಮಹಾರಾಣಾ ಪ್ರತಾಪಸಿಂಹ ಭಾವ ಚಿತ್ರದ ಮೆರವಣಿಗೆಗೆ ಸಮೀತಿ ಸಂಘದ ಅಧ್ಯಕ್ಷರಾದ ಜಿ.ಎಸ್.ರಜಪೂತ ಚಾಲನೆ ನೀಡಿದರು. ಮೆರವಣಿಗೆಯು ಶ್ರೀ ಲಕ್ಷ್ಮೀದೇವರ ಗುಡಿಯ ವರೆಗೆ ಹೋಗಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಕಾರ್ಯಾಲಯ ತಲುಪಿತು.
ಈ ಸಂದರ್ಭದಲ್ಲಿ ಹಿರಿಯರಾದ ಬಸವರಾಜ ಹೊಸಮನಿ, ಭೂಪಾಲ ಬೆಳವಿ, ಲಗಮಪ್ಪಾ ಮಲ್ಲಾಪೂರೆ, ಎಂ.ಎಸ್.ಮಹಾಲಮನಿ, ಸಮಾಜದ ಹಿರಿಯರಾದ ಸುರತಸಿಂಗ, ಕಾರ್ಯದರ್ಶಿ ರಾಜಶೇಖರಸಿಂಗ, ರತನಸಿಂಗ, ಕರನಸಿಂಗ, ರಾಘವೇಂದ್ರಸಿಂಗ, ಪ್ರತಾಪಸಿಂಗ, ಉದಯಸಿಂಗ, ನಾರಾಯಣಸಿಂಗ, ಸುರೇಶಸಿಂಗ, ಅಜಿತಸಿಂಗ, ಸಚ್ಚಿನಸಿಂಗ, ಚೇತನಸಿಂಗ, ಪ್ರವೀನಸಿಂಗ, ಆನಂದಸಿಂಗ, ರೋಹನಸಿಂಗ, ಅರುಣಸಿಂಗ, ನಾಗರಾಜಸಿಂಗ, ಪ್ರತಾಪಸಿಂಗ, ಮೋಹನಸಿಂಗ ರಜಪೂತ ಮಹಿಳಾ ಸಂಘದವರು ಉಪಸ್ಥಿತರಿದ್ದರು.