ಘಟಪ್ರಭಾ:ಕಬ್ಬಿನ ವಸ್ತುಗಳನ್ನು ಕದ್ದು ಮಾರುತ್ತಿದ್ದ ಕಳ್ಳರ ಬಂಧನ
ಕಬ್ಬಿನ ವಸ್ತುಗಳನ್ನು ಕದ್ದು ಮಾರುತ್ತಿದ್ದ ಕಳ್ಳರ ಬಂಧನ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 22 :
ರೇಲ್ವೆ ಇಲಾಖೆಯ ಕಬ್ಬಿನ ವಸ್ತುಗಳನ್ನು ಕದ್ದು ಮಾರುತ್ತಿದ್ದ ಕಳ್ಳರನ್ನು ಘಟಪ್ರಭಾ ಹಾಗೂ ಕುಡಚಿಯ ಆರ್.ಪಿ.ಎಫ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ಮಂಗಳವಾರ ಸಂಜೆ ಜರುಗಿದೆ.
ಎರಡು ಮೂರು ಬಾರಿ ರೇಲ್ವೆ ಇಲಾಖೆಯ ಬೆಲೆ ಬಾಳುವ ವಸ್ತುಗಳನ್ನು ರಾತ್ರಿ ವೇಳೆ ಕದ್ದು ಎಮ್.ಎಚ್.10 ಇ 1187 ನಂಬರಿನ ವಾಹನದಲ್ಲಿ ಬೇರೆ ಕಡೆಗೆ ಸಾಗಾಣಿಕೆ ಮಾಡಿ ಮಾರುತ್ತಿದ್ದ ಕುಡಚಿಯ ನಿವಾಸಿ ನಿಯಾಜಅಹ್ಮದ ತಾಂಬೋಲಿ (40) ಹಾಗೂ ಮಿರಜದ ನಿವಾಸಿ ಮುಜಾಪರ್ ಸೌದಾಗರ (20) ಇವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಸುಮಾರು 1,15,598 ರೂಪಾಯಿ ಬೆಲೆ ಬಾಳುವ ರೇಲ್ವೆ ಹಳಿ ಜೋಡನೆಯ 13 ಚೌನ್ ಲಿಂಕ ಮತ್ತು ನಟ್ಟುಗಳನ್ನು ಸೇರಿದಂತೆ ಒಂದು ವಾಹನ ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಘಟಪ್ರಭಾ ಆರ್.ಪಿ.ಎಫ್ ಪೊಲೀಸರು ರಾಯಬಾಗದ ಜೆ.ಎಮ್.ಎಫ್.ಸಿ ಕೋರ್ಟಿಗೆ ಬುಧವಾರದಂದು ಹಾಜರಪಡಿಸಿದ್ದಾರೆ.
ಆರ್.ಪಿ.ಎಫ್ ಸಿಪಿಆಯ್ ದಿನೇಶಕುಮಾರ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಎ.ಎಸ್.ಆಯ್ ಎಮ್.ಎಸ್.ವಾಳದವರ, ಸಿಬ್ಬಂದಿಗಾಳದ ವಿ.ಎ.ಬಿಲಕುಂದಿ ಮತ್ತು ಎಮ್.ವಿ.ನಾಯಿಕ ಇದ್ದರು.