ಬೆಳಗಾವಿ:ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ : ಸಚಿವ ಸತೀಶ ಟಾಂಗ್
ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ : ಸಚಿವ ಸತೀಶ ಟಾಂಗ್
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 24 :
ರಮೇಶ ಒಬ್ಬ ಬದ್ಧತೆ ಇಲ್ಲದ ಶಾಸಕ, ಅರ್ಥವಿಲ್ಲದ ಮಾತುಗಳನ್ನು ಆಡುತ್ತಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಬೆಳಗಾವಿಯಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನೇನು ಮಂತ್ರಿಗಿರಿ ಕಸಿದುಕೊಂಡಿಲ್ಲ. ನನಗೆ ಮೂರು ವರ್ಷ ಮಂತ್ರಿಗಿರಿ ಇಲ್ಲದಾಗ ಸುಮ್ಮನಿರಲಿಲ್ಲವೇ ಎಂದು ಸತೀಶ ಸಹೋದರ ರಮೇಶ ಅವರಿಗೆ ಮರು ಪ್ರಶ್ನಿಸಿದರು.
ರಮೇಶ ಹಾರಕಿಹೊಳಿ ಒಂದು ವಸ್ತು ಕಳೆದುಕೊಂಡಿದ್ದಾನೆ, ಅದಕ್ಕಾಗಿ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ರಾಜಕೀಯ ಬಂಡಾಯಕ್ಕೆ ಸಂಬಂಧಿಸಿದಂತೆ ರಮೇಶ ಜಾರಕಿಹೊಳಿ ಅವರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಸತೀಶ ಜಾರಕಿಹೊಳಿ ಅವರು
ರಮೇಶ ಜಾರಕಿಹೊಳಿ ‘ಒಂದು ವಸ್ತು’ ಕಳೆದುಕೊಂಡು ಹತಾಶರಾಗಿ ನನ್ನ ಮೇಲೆ ಆ ಸಿಟ್ಟು ತೆಗೆಯುತ್ತಿದ್ದಾರೆ. ನನಗೆ ಫ್ಯಾಮಿಲಿಗಿಂತ ಪಕ್ಷವೇ ಮುಖ್ಯ ಎಂದು ಪ್ರತಿಪಾದಿಸಿದರು.
ರಮೇಶ ಜಾರಕಿಹೊಳಿ ಅಳಬುರಕನೃ ಹೊರತು ನಾನು ಅಳುವ ಜಾಯಮಾನದವನಲ್ಲ. ನಾನು ಯಾವುದೇ ಸನ್ನಿವೇಶವನ್ನು ಚಾಲೆಂಜಾಗಿ ಸ್ವೀಕರಿಸಿ ಎದುರಿಸುವ ಛಾತಿಯವನು ಎಂದು ಸತೀಶ ಪ್ರತಿಕ್ರಿಯಿಸಿದ್ದಾರೆ.