ಗೋಕಾಕ:ರಿಲ್ಯಾಕ್ಸ್ ಮೂಡಿಗೆ ಜಾರಿ ಆಪ್ತರೊಂದಿಗೆ ಬಿರ್ಯಾನಿ ಸವಿದ ಸಚಿವ ಸತೀಶ ಜಾರಕಿಹೊಳಿ , ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಲಖನ್
ರಿಲ್ಯಾಕ್ಸ್ ಮೂಡಿಗೆ ಜಾರಿ ಆಪ್ತರೊಂದಿಗೆ ಬಿರ್ಯಾನಿ ಸವಿದ ಸಚಿವ ಸತೀಶ ಜಾರಕಿಹೊಳಿ , ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಲಖನ್
ನಮ್ಮ ಬೆಳಗಾವಿ ಸುದ್ದಿ ಗೋಕಾಕ, ಏ 24 :
ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸತೀಶ ಜಾರಕಿಹೊಳಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ . ಮತದಾನ ಮುಗಿಯುತ್ತಿದಂತೆ ಸಚಿವ ಸತೀಶ ರಾಜಕೀಯ ಜಂಜಾಟ ಮರೆತು ಮಂಗಳವಾರ ರಾತ್ರಿ ಗೋಕಾಕಿನ ಹೋಟೆಲ್ ನಿಯಾಜ ನಲ್ಲಿ ಆಪ್ತರೊಂದಿಗೆ ಸಮಾಲೋಚನೆ ಮಾಡಿ ಇಂದು ಮುಂಜಾನೆ ಬೆಳಗಾವಿಯಲ್ಲಿ ತಮ್ಮ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ .
ಇನ್ನೂ ಕಳೆದ ಹತ್ತಾರು ದಿನಗಳಿಂದ ಗೋಕಾಕ ಮತಕ್ಷೇತ್ರದಾದ್ಯಂತ ಬಿರುಸಿ ಪ್ರಚಾರ ನಡೆಯಿಸಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದ್ದ ಕಾಂಗ್ರೆಸ್ ಯುವ ಮುಖಂಡ ಲಖನ ಜಾರಕಿಹೊಳಿ ಇಂದು ಮುಂಜಾನೆಯಿಂದ ತಮ್ಮ ಬೆಂಬಲಿಗರೊಂದಿಗೆ ತಮ್ಮ ಪಕ್ಷದ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ವಿಶ್ವಾಸದಲ್ಲಿದ್ದಾರೆ .
ಗೆಲುವಿನ ಲೆಕಾಚಾರ ಏನೇ ಇರಲಿ ಫಲಿತಾಂಶಕ್ಕಾಗಿ ಒಂದು ತಿಂಗಳಕಾಲ ಕಾಯಬೇಕಾಗಿದೆ .
ಈ ಸಂದರ್ಭದಲ್ಲಿ ಸಚಿವರ ಆಪ್ತರಾದ ಬಸವರಾಜ ಸಾಯನ್ನವರ , ರಿಯಾಜ ಚೌಗಲಾ , ಶಿವು ಪಾಟೀಲ್ , ,ಆರೀಪ ಪೀರಜಾದೆ ಸೇರಿದಂತೆ ಅನೇಕರು ಇದ್ದರು

