ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ

ಬಬಲಾದಿ ಮಠದ ಶ್ರೀ ಶಿವಯ್ಯಾ ಸ್ವಾಮಿಗಳ ಆಶಿರ್ವಾದ ಪಡೆದು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತಿರುವ ಸುರೇಶ ಪಾಟೀಲ.
ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ
ಘಟಪ್ರಭಾ ಏ 30 : ಗೋಕಾಕ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಅವರು ರವಿವಾರ ಸಮೀಪದ ಶಿಂದಿಕುರಬೇಟ ಗ್ರಾಮದ ಬಬಲಾದಿ ಮಠದಲ್ಲಿ ಪೂಜೆ ಸಲ್ಲಿಸಿ ಶ್ರೀ ಶಿವಯ್ಯಾ ಮಹಾಸ್ವಾಮಿಗಳ ಆಶಿರ್ವಾದ ಪಡೆದು ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.
ಈ ಸಂಧರ್ಭದಲ್ಲಿ ಚಿರಾಕಲಿಶಾ ಮಕಾಂದಾರ, ಜಿ.ಎಸ್.ರಜಪೂತ, ಸಂಜೀವ ನಾಯಿಕ, ಗುರುಪ್ರಸಾದ ಪಾಟೀಲ, ಎಸ್.ಎಚ್.ಗಿರಡ್ಡಿ, ರಾಜು ಪಾಟೀಲ, ಪ್ರದೀಪ ಗಾಯಕವಾಡ, ಕಲಗೌಡಾ ಪಾಟೀಲ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.