RNI NO. KARKAN/2006/27779|Saturday, April 20, 2024
You are here: Home » breaking news » ಗೋಕಾಕ:ರಮೇಶ ಬಿಜೆಪಿ ಸೇರಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ ಕಾಂಗ್ರೇಸ್ ಅಭ್ಯರ್ಥಿ: ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ರಮೇಶ ಬಿಜೆಪಿ ಸೇರಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ ಕಾಂಗ್ರೇಸ್ ಅಭ್ಯರ್ಥಿ: ಸಚಿವ ಸತೀಶ ಜಾರಕಿಹೊಳಿ 

ರಮೇಶ ಬಿಜೆಪಿ ಸೇರಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ ಕಾಂಗ್ರೇಸ್ ಅಭ್ಯರ್ಥಿ: ಸಚಿವ ಸತೀಶ ಜಾರಕಿಹೊಳಿ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 18 :

 

ರಮೇಶ ಜಾರಕಿಹೊಳಿಯವರು ಈಗಾಗಲೆ ಕಾಂಗ್ರೇಸ್ ಪಕ್ಷದಿಂದ ದೂರವಿದ್ದು ಪಕ್ಷದ ಪರವಾಗಿ ಪ್ರಚಾರ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಇದರ ಬಗ್ಗೆ ಈಗಾಗಲೆ ಹೈಕಮಾಂಡ್ ಗಮನಕ್ಕೂ ತರಲಾಗಿದೆ . ರಮೇಶ ಜಾರಕಿಹೊಳಿಯವರ ಮನಸ್ಸು ಬದಲಾಯಿಸುವ ಪ್ರಯತ್ನ ಈಗ ಕೈಮೀರಿ ಹೋಗಿದೆ ಅವರು ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ ಜಾರಕಿಹೊಳಿಯವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಅರಣ್ಯ ಖಾತೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಅವರು ಗುರುವಾರ ಘಟಪ್ರಭಾಕ್ಕೆ ಲೋಕಸಭೆಯ ಕಾಂಗ್ರೇಸ್ ಅಭ್ಯರ್ಥಿ ಡಾ|| ಸಾದುನವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ರಮೇಶ ಜಾರಕಿಹೊಳಿಯವರು ಯಾವ ಕಾರಣಕ್ಕೆ ಪಕ್ಷ ಬಿಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಜಾರಕಿಹೊಳಿ ಕುಟುಂಬದಲ್ಲಿ ರಾಜಕೀಯ ಗುರುವಾಗಿದ್ದರು ಸಹ ಈಗ ಪರಿಸ್ಥಿತಿ ನನ್ನ ಕೈಮೀರಿದೆ ಗೋಕಾಕದಲ್ಲಿ ಕಾಂಗ್ರೇಸ್ ಪಕ್ಷ ಬಲ ಪಡಿಸುವ ಉದ್ದೇಶದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇನೆ. ಜಾರಕಿಹೊಳಿ ಸಹೋದರರು ಎಲ್ಲರು ಒಂದೇ ಎನ್ನುವುದು ಸುಳ್ಳು ರಾಜಕೀಯದಿಂದ ಎಲ್ಲರು ಬೇರೆ ಬೇರೆಯಾಗಿದ್ದೇವೆ ಇದರಿಂದ ಜಾರಕಿಹೊಳಿ ಅಭಿಮಾನಿಗಳಲ್ಲಿ ಗೊಂದಲವಾಗಿರುವುದು ನಿಜ ಹಾಗೆಯೇ ಮುಂದೆ ಗೋಕಾಕ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ಮದ್ಯೆ ಸ್ಪರ್ಧೆಯಾಗುವುದರಲ್ಲಿ ಯಾವುದೆ ಸಂಶಯವಿಲ್ಲವೆಂದು ಹೇಳಿದರು.
ಕೆಲವು ಹಿರಿಯ ಕಾರ್ಯಕರ್ತರು ಸಚಿವರಿಗೆ ರಮೇಶ ಜಾರಕಿಹೊಳಿಯವರ ಮನವೊಲಿಸಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಅವರು ಕಾರ್ಯಕರ್ತರೇ ರಮೇಶ ಜಾರಕಿಹೊಳಿ ಅವರಿಗೆ ಬುದ್ದಿ ಹೇಳಬೇಕು. ಈ ವಿಷಯ ನಮ್ಮ ಕೈಮೀರಿ ಹೋಗಿದೆ. ಈ ಚುನಾವಣೆ ಸೆಮಿ ಫೈನಲ್ ಆಗಿದ್ದು, ಮುಂದಿನ ದಿನಗಳಲ್ಲಿ ಫೈನಲ್ ನಡೆಯಲಿದೆ. ನಮಗೆ ಆರು ತಿಂಗಳು ಕಾಲಾವಕಾಶ ಸಿಕ್ಕರೆ ಕ್ಷೇತ್ರದ ಚಿತ್ರಣ ಬದಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಹುಕ್ಕೇರಿ, ಪ್ರಕಾಶ ಡಾಂಗೆ, ಮಡಿವಾಳಪ್ಪಾ ಮುಚಳಂಬಿ, ಪರಶುರಾಮ ಕಲಕುಟಗಿ, ಸುಲ್ತಾನಸಾಬ ಕಬ್ಬೂರ, ಸುರೇಶ ಭೋಸಲೆ, ಈರಣ್ಣ ಕಲಕುಟಗಿ, ಮುನ್ನಾ ಸೌದಾಗರ, ಕೆಎಚ್‍ಐ ಶಿಂಧೆ, ಅಣ್ಣಪ್ಪ ಹುನಗುಂದ, ನೂರ ಮೋಮಿನ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಮುಸ್ಲಿಂ ಮುಖಂಡರು ಹಾಜರಿದ್ದರು.

Related posts: