ಬೆಳಗಾವಿ:ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು
ಬೆಳಗಾವಿಯಲ್ಲಿ ಅದ್ದೂರಿ ಕಲಾವಿದರ ದಿನಾಚರಣೆ : ವಿನೂತನವಾಗಿ ತಮ್ಮ ಹಬ್ಬ ತಾವೇ ಆಚರಿಸಿಕೊಂಡು ಸಂಭ್ರಮಪಟ್ಟ ಕಲಾವಿದರು
ಬೆಳಗಾವಿ ಜು 3 : ಕಲಾವಿದರ ದಿನಾಚರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸಾವಿರಾರು ಕಲಾವಿದರು
ಸೇರಿ ತಮ್ಮ ಹಬ್ಬವನ್ನು ಆಚರಿಸಿಕೊಂಡು ಖುಷಿ ಪಟ್ಟರು
ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕಲಾವಿದರೆಲ್ಲರೂ ಒಟ್ಟಾಗಿ ಸೇರಿ ಕುಣಿದು ಕುಪ್ಪಳಿಸಿ ತಮ್ಮ ಹಬ್ಬವನ್ನು ವಿನೂತನವಾಗಿ ಆಚರಿಸಿದರು. ಜಿಲ್ಲೆಯ ರಾಯಬಾಗ, ಅಥಣಿ, ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ ಸೇರಿದಂತೆ ಜಿಲ್ಲೆಯ ಹತ್ತು ತಾಲೂಕಿನ ಸಾವಿರಾರು ಕಲಾವಿದರು ಭಾಗಿಯಾಗಿ ಹಬ್ಬವನ್ನು ಆಚರಣೆ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ, ಮುಗಳಕೋಡ ಶ್ರೀ ಮುರಗೇಂದ್ರ ಸ್ವಾಮೀಜಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲೆ ಸಂಸ್ಕೃತಿ ಉಳಿವಿಗಾಗಿ ಒಗ್ಗಟ್ಟಾದ ಜಿಲ್ಲೆಯ ಕಲಾವಿದರು ನಗರದ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚನ್ನಮ್ಮ ವೃತ್ತದಿಂದ ಕುಮಾರಗಂಧರ್ವ ಹಾಲ್ವರೆಗೆ ಕಲಾವಿದರ ಜಾಥಾ ನಡೆಸಿದರು. ತಮ್ಮ ಹಬ್ಬದಲ್ಲಿ ಲಂಬಾಣಿ, ಡೊಳ್ಳು, ಜಾಂಜ ಪತಂಗ್, ಭಜನೆ, ಸಹನಾಯಿ. ಹಾಗೂ ವಿವಿಧ ವೇಶ ಭೂಷಣ ತೊಟ್ಟು ಕಲಾವಿದರು ಸಂಭ್ರಮಪಟ್ಟರು