ಗೋಕಾಕ:ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ
ಮರ ಬೆಳೆಸಿ ತಾಪ ಇಳಿಸಿ : ಮುರಘರಾಜೇಂದ್ರ ಮಹಾಸ್ವಾಮಿಗಳ 47 ಜನ್ಮ ದಿನದ ಕಾರ್ಯಕ್ರಮದಲ್ಲಿ ಎಂ.ಕೆ.ಪಾತ್ರೋಟ ಸಲಹೆ
ಗೋಕಾಕ ಜೂ 24: ತೀವ್ರ ಬರಗಾಲ ದಿಂದ ತತ್ತರಿಸುತ್ತಿರುವ ನಾಡನ್ನು ಉಳಿಸಿ ಬೆಳೆಸಲು ನಾವೆಲ್ಲರು ಪನ ತೊಡಬೇಕಾಗಿದೆ ಎಂದು ಗೋಕಾಕ ವಲಯ ಅರಣ್ಯಾಧಿಕಾರಿ ಎಂ.ಕೆ.ಪಾತ್ರೋಟ ಹೇಳಿದರು
ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಮ.ನಿ.ಪ್ರ ಮುರಘರಾಜೇಂದ್ರ ಮಹಾಸ್ವಾಮಿಗಳ 47ನೇ ಜನ್ಮದಿನದ ಸಮಾರಂಭದಲ್ಲಿ ವಿದ್ಯಾಪೀಠದ ಆವರಣದಲ್ಲಿ ಸಸಿ ನೆಟ್ಟಿ ಮಾತನಾಡಿದರು
ಪರಿಸರ ಕಾಳಜಿ ಇಲ್ಲದೆ ಇಂದು ನಮ್ಮಸುತ್ತಲಿನ ಸೌಂದರ್ಯ ಹಾಳಾಗುತ್ತಿದೆ ಯುವ ಜನಾಂಗಕ್ಕೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಚಿವರ ಮಾರ್ಗದರ್ಶನದಲ್ಲಿ ಮುಂಬರುವ ದಿನಗಳಲ್ಲಿ ಇಲೋಖೆಯಿಂದ ಹಲವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು
ಪ್ರತಿಯೊಬ್ಬರು ಜವಾಬ್ದಾರಿಯಿಂದ ತಮ್ಮ ಸುತ್ತಲಿನ ಪರಿಸರವನ್ನು ಹಚ್ಚ ಹಸಿರಾಗಿಸಲು ಸಸಿಗಳನ್ನು ನೆಟ್ಟಲು ಕ್ರಮ ಕೈಗೊಳ್ಳಬೇಕು ಇದಕ್ಕೆ ಅರಣ್ಯ ಇಲಾಖೆಯಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದೆಂದು ಪಾತ್ರೋಟ ಹೇಳಿದರು
ಸಮಾರಂಭದ ದಿವ್ಯ ಸಾನಿಧ್ಯವನ್ನು ಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ , ಯುವ ವೇದಿಕೆಯ ಮಂಜು ಪ್ರಭುನಟ್ಟಿ , ಕಿರಣ ವಾಲಿ , ಆನಂದ ಖಾನಪ್ಪನವರ , ಮಾಹಾದೇವ ಜಾಗನೂರ ಸೇರಿದಂತೆ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಸರಳ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲ ಭಕ್ತಾಧಿಗಳಿಗೆ ಒಂದೊಂದು ಸಸಿಗಳನ್ನು ವಿತರಿಸಲಾಯಿತು