RNI NO. KARKAN/2006/27779|Sunday, June 15, 2025
You are here: Home » breaking news » ಘಟಪ್ರಭಾ:ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ

ಘಟಪ್ರಭಾ:ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ 

ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಿ: ರೇವತಿ ಎಂ.ಮಠದ

ಘಟಪ್ರಭಾ ಸೆ 8 : ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಒಳ್ಳೇಯ ನಾಗರೀಕರನ್ನಾಗಿ ಕೊಡುಗೆ ನೀಡಬೇಕೆಂದು ಚಿಕ್ಕೋಡಿಯ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಶ್ರೀಮತಿ ರೇವತಿ ಎಂ.ಮಠದ ಕರೆ ನೀಡಿದರು.
ಅವರು ಶನಿವಾರದಂದು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ರಾಚಯ್ಯಸ್ವಾಮಿ ಹಿರೇಮಠ ಪ್ರತಿಷ್ಠಾನದ ವತಿಯಿಂದ ಗುರುಸ್ಮರಣೆ ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಕರು ಶಾಲೆಯಲ್ಲಿ ಮಕ್ಕಳೊಂದಿಗೆ ಮುಗ್ಳನಗೆಯಿಂದ ಮಾರ್ಗದರ್ಶನ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ತಾಯಿಯೇ ಮೊದಲು ಗುರು ಆದರೆ ಅದು ಕೇವಲ ಆರು ವರ್ಷದವರೆಗೆ ನಂತರ ಶಿಕ್ಷಕರೇ ಮಕ್ಕಳಿಗೆ ಗುರುವಾಗಿ ಬೋಧನೆ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಅಂಕ ಗಳಿಸುವುದಕ್ಕಿಂತ ಅವರಲ್ಲಿ ಸಾಮಾನ್ಯ ಜ್ಞಾನ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಜೀವನವಿಡೀ ನಿಸ್ವಾರ್ಥದಿಂದ ದುಡಿದು ಸಾವಿರಾರು ಮಕ್ಕಳ ಜೀವನವನ್ನು ಹಸನಾಗಿಸಿದ ಡಾ| ರಾಧಾಕೃಷ್ಣನ ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡು ರಾಷ್ಟ್ರ ನಿರ್ಮಾಣ ಮಾಡುವ ಶಿಲ್ಪಿ ಶಿಕ್ಷಕರಾಗಬೇಕು ಎಂದರಲ್ಲದೇ ಮ್ಕಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ವಿ.ಪಿ.ಹಂಚಿನಮನಿ ಸ್ವತಂತ್ರ ಸೈನ್ಸ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರೀಯಾ ರಾಮು ಕಬಾಡಗಿ ಮಾತನಾಡಿ ಆದರ್ಶ ಶಿಕ್ಷಕರನ್ನು ಗುರುತಿಸಿ ಅವರಿಗೆ ಗುರುಸ್ಮರಣೆ ಪುರಸ್ಕಾರ ನೀಡುತ್ತಿರುವ ಶ್ರೀ ರಾಚಯ್ಯಸ್ವಾಮಿ ಹಿರೇಮಠ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಸಿದ್ರಾಮೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಸ್.ದೊಡಮನಿ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರತಾಪ.ಬಿ.ಕದಮ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಪ್ರತಿಷ್ಠಾನದ ಅಧ್ಯಕ್ಷ ದುಂಡಯ್ಯ ಹಿರೇಮಠ, ಉಪಾಧ್ಯಕ್ಷ ವಿ.ಎಸ್.ಮುನ್ನೋಳಿಮಠ, ಕಾರ್ಯದರ್ಶಿ ಶ್ರೀಕಾಂತ ಹಿರೇಮಠ, ಬಿ.ಎಲ್.ಅಮೀನಗಡ, ವಿಠ್ಠಲ ಕರೋಶಿ, ಅಡಿವೆಪ್ಪ ಚೌವ್ಹಾಣ, ಶಿವಶಂಕರ ಇಟ್ಯಾಗೋಳ, ಚಂದ್ರು ಹೊಸಪೇಟಿ ಸೇರಿದಂತೆ ಇತರರು ಇದ್ದರು.
ತೇಜೇಸ್ವಿನಿ ಭೂತಿ, ಭಾಗ್ಯಶ್ರೀ ಭೂತಿ ಇವರಿಂದ ಭರತನಾಟ್ಯ ಜರುಗಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರನ್ನು ಸತ್ಕರಿಸಲಾಯಿತು. ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts: