ಬೆಳಗಾವಿ:ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು
ನಾಡವಿರೋಧಿ ಸಂಘಟನೆಗಳಿಂದ ಮತ್ತೆ ಜೈ ಮಹಾರಾಷ್ಟ್ರ ಘೋಷಣೆ : ಮೌನ ವಹಿಸಿದ ಬೆಳಗಾವಿ ಪೊಲೀಸರು
ಬೆಳಗಾವಿ ಜೂ 3: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವನ್ನು ಮುಂದುಮಾಡಿಕೊಂಡು ಬೆಳಗಾವಿಯಲ್ಲಿ ಭಾಷಾ ಸಾಮರಸ್ಯಭಾವವನ್ನು ಕೆದಕಲು ಮುಂದಾಗಿ, ಬೆಳಗಾವಿ ಜಿಲ್ಲೆಯ ಗಡಿಯಿಂದಲೇ ಮಹಾರಾಷ್ಟ್ರಕ್ಕೆ ವಾಪಸಾದ ಮಹಾರಾಷ್ಟ್ರ ರಾಜ್ಯದ ಸಾರಿಗೆ ಮಂತ್ರಿ ದಿವಾಕರ ರಾವತ್ ಅವರು ತಮ್ಮ ಸಾರಿಗೆ ಬಸ್ಸಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬರೆಯುವಂತೆ ಆದೇಶ ಹೊರಿಡಿಸಿದ್ದಾರೆ.
ಅದರಂತೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದ ಮುಂಬೈ-ಬೆಳಗಾವಿ ಬಸ ಶುಕ್ರವಾರ ರಾತ್ರಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಆಗಮಿಸುತ್ತಿದಂತೆ ನಾಡದ್ರೋಹಿ ಎಂಈಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು
ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದರು ಸಹ ಪೊಲೀಸರು ಅವರನ್ನು ಬಂಧಿಸುವ ಗೋಜಿಗೆ ಹೋಗದಿರುವುದನ್ನು ಕ್ರಮವನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ
ಪದೇ ಪದೇ ಜೈ ಮಹಾರಾಷ್ಟ್ರ ಘೋಷಣೆ ಕೂಗಿ ಎಂಇಎಸ್ ಅಟ್ಟಹಾಸ ಮೆರೆದ್ರು ಪೊಲೀಸ್ ಇಲಾಖೆ ಜಾನ ಮೌನವಹಿಸುತ್ತಿರುವುದು ಕನ್ನಡ ಪರ ಮನಸ್ಸುಗಳಿಗೆ ಘಾಸಿ ಉಂಟು ಮಾಡಿದೆ