ಗೋಕಾಕ:ಮಳೆಗಾಗಿ ಪ್ರಾರ್ಥನೆ ; ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ
ಮಳೆಗಾಗಿ ಪ್ರಾರ್ಥನೆ : ಗೋಕಾಕಿನ ಕಲಾವಿದ ಕಾಡೇಶಕುಮಾರ ರಿಂದ ನಿರಂತರ 12 ಘಂಟೆ ಗಾಯನ
ಗೋಕಾಕ ಜೂ 8 : ಇಲ್ಲಿಯ ಕಲಾವಿದ ಕಾಡೇಶಕುಮಾರ ಅವರು ಸಮೃದ್ಧ ಮಳೆ ಹಾಗೂ ನಾಡಿನ ಸುಖ ಸಂಪತ್ತಿಗಾಗಿ ಪ್ರಾರ್ಥಿಸಿ ನಿರಂತರ 12 ಘಂಟೆಗಳ ಕಾಲ ದೇವರ ನಾಮ ಸ್ಮರಣೆ ನಡೆದಿದೆ
ಸ್ಥಳಿಯ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಇಂದು ಮುಂಜಾನೆ 8 ಘಂಟೆಗೆ ಬನ್ನಿ ಮಳೆಗಾಗಿ ಪ್ರಾರ್ಥಿಸೋಣ ತಲೆಬರಹದಡಿ ಪ್ರಾರಂಬವಾಗಿರುವ ಕಲಾವಿದ ಕಾಡೇಶಕುಮಾರ ಅವರ ದೇವ ಸ್ಮರಣೆಯು ರಾತ್ರಿ 8 ಘಂಟೆವರೆಗೆ ನಡೆಯಲಿದೆ
ದೇವರ ಸ್ಮರಣೆವುಳ ಭಕ್ತಿ ಗೀತೆ , ಭಾವ ಗೀತೆ ಸೇರಿದಂತೆ ವಿವಿಧ ಹಾಗೂ ಡುಗಳನ್ನು ಹಾಡಿ ಮಳೆಗಾಗಿ ಭಕ್ತಿಯಿಂದ ಪ್ರಾರ್ಥನೆ ನಡೆದಿದೆ