ಮೂಡಲಗಿ: ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ
ಆಯತಪ್ಪಿ ನದಿಗೆ ಬಿದ್ದು ಯವಕನ ಸಾವು : ಸುಣಧೋಳಿ ಗ್ರಾಮದಲ್ಲಿ ಘಟನೆ
ಮೂಡಲಗಿ ಅ 3: ಸೈಕಲ್ ಮೇಲೆ ತೆರಳುತ್ತಿದ್ದ ಬಾಲಕನೊಬ್ಬ ಘಟಪ್ರಭಾ ನದಿಗೆ ಬಿದ್ದು ಸಾವಿಗೀಡಾದ ಘಟನೆ ಗೋಕಾಕ ತಾಲೂಕು ಸುಣಧೋಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಬಸವರಾಜ ಭರಮಪ್ಪ ಸುಭಾನಿ (14) ಎಂಬ ಎಂಟನೇ ತರಗತಿ ಬಾಲಕನೇ ಮೃತ ದುರ್ದೈವಿ. ಸೈಕಲ್ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಲಾರಿಯಿಂದ ಬದಿಗೆ ಸರಿಯಲು ಹೋಗಿ ಆಯತಪ್ಪಿ ನದಿಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ
ಕುಲಗೋಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬಾಲಕನ ಶವ ಪತ್ತೆಗೆ ಶೋಧ ಕಾರ್ಯ ನಡೆದಿದೆ. ನದಿಗೆ ತಡೆಗೋಡೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ