ಗೋಕಾಕ:ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ
ಹಳ್ಳಿಗಳಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ
*ಅಭಿನವ ಶಿವಾನಂದ ಮಹಾಸ್ವಾಮಿಜಿ ಅಭಿಮತ *ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ
ಬೆಟಗೇರಿ ಜು 2 : ಗ್ರಾಮೀಣ ವಲಯದಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಾಯ ಸಹಕಾರ ಅವಶ್ಯಕ. ಸಹಕಾರಿ ಸಂಘ, ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಸಂಘದ ಗ್ರಾಹಕರ ಜೋತೆ ಅವಿನಾಭಾವ ಸಂಬಂಧವಿರಿಸಿಕೊಂಡು, ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮುಧೋಳ ಕಾಲನಿಯಲ್ಲಿರುವ ಮುಧೋಳ ಅವರ ವಾಣಿಜ್ಯ ಸಂಕೀರ್ಣದ ನೂತನ ಕಟ್ಟಡದಲ್ಲಿ ರವಿವಾರ ಜುಲೈ.1 ರಂದು ಆರಂಭಿಸಲಾದ ಮಹಾಲಕ್ಷ್ಮೀ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿಯ ನೂತನ ಕಛೇರಿಯ ಮಹಾಲಕ್ಷ್ಮೀ ಮಾಹಾಪೂಜೆ ಹಾಗೂ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ ಎಂದರು.
ಸ್ಥಳೀಯ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಕಾರ್ಯಕ್ರಮದ ನೇತೃತ್ವ, ಯುವ ಮುಖಂಡ ಶ್ರೀಧರ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.
ಇಲ್ಲಿಯ ಮಹಾಲಕ್ಷ್ಮೀ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿಯ ಕಛೇರಿಯನ್ನು ನೂತನ ಕಟ್ಟಡದಲ್ಲಿ ಮಹಾಲಕ್ಷ್ಮೀ ಮಾಹಾಪೂಜೆಯೊಂದಿಗೆ ಉದ್ಘಾಟಿನೆ ನೆರವೇರಿಸಿದ ಬಳಿಕ ಸಹಕಾರಿಯ ನೂತನ ಆಡಳಿತ ಮಂಡಳಿ ಸದಸ್ಯರ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆದ ನಂತರ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಅವರನ್ನು ಸಹಕಾರಿಯ ಪರವಾಗಿ ಶಾಲು ಹೊದಿಸಿ ಸತ್ಕರಿಸಲಾಯಿತು. ಬಳಿಕ ಸಿಹಿ ವಿತರಿಸಲಾಯಿತು.
ಬಸಪ್ಪ ಮೇಳೆಣ್ಣವರ, ಪುಂಡಲೀಕಪ್ಪ ಪಾರ್ವತೇರ, ನಾಗಪ್ಪ ಮುರಗೋಡ, ನಿವೃತ್ತ ಡಿಡಿಪಿಯು ಈರಣ್ಣ ದೇಯಣ್ಣವರ, ಈಶ್ವರ ಬಳಿಗಾರ, ರಾಮಣ್ಣ ಮುಧೋಳ, ರಾಮಣ್ಣ ನೀಲಣ್ಣವರ, ಗೌಡಪ್ಪ ಮೇಳೆಣ್ಣವರ, ಈರಪ್ಪ ದೇಯಣ್ಣವರ, ಪ್ರಾಣೇಶ ಪಾಟೀಲ, ಅರುಣ ನೀಲಣ್ಣವರ, ಯಲ್ಲಪ್ಪ ಮೇಳೆಣ್ಣವರ, ಅಪ್ಪಯ್ಯ ಆಶೆಪ್ಪಗೋಳ, ಭೀಮಪ್ಪ ಕಿಲೆದಾರ, ಮುತ್ತೆಪ್ಪ ಕನೊಜಿ, ಶಿವಲಿಂಗ ಜಾಡರ, ಬಾಳಪ್ಪ ಮಾಳೇದ, ಪುಂಡಲೀಕ ಬಳಿಗಾರ, ಚಾಯಪ್ಪ ಗಜಾಕೋಶ, ಸೇರಿದಂತೆ ಸಹಕಾರಿಯ ನೂತನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಶೇರ ಮೆಂಬರ ಸದಸ್ಯರು, ಗ್ರಾಹಕರು, ಗ್ರಾಮಸ್ಥರು, ಇತರರು ಇದ್ದರು.
ಬಸವರಾಜ ಪಣದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಭಾಗೋಜಿ ಕೊನೆಗೆ ವಂದಿಸಿದರು.