ಗೋಕಾಕ:ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಚಂದ್ರು ಹಾಲೊಳ್ಳಿ

ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ : ಚಂದ್ರು ಹಾಲೊಳ್ಳಿ
ಬೆಟಗೇರಿ ಜೂ 22 : ಪ್ರತಿಯೊಬ್ಬರು ನಿತ್ಯ ಸ್ವಲ್ಪ ಸಮಯವಾದರೂ ಯೋಗ ಮಾಡಬೇಕು. ಯೋಗ ಮಾಡುವುದರಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಪೂರ್ವ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಪೂರ್ವ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಜೂ.21 ರಂದು ಆಯೋಜಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ದೇವಕಿ ಗೌಡ ಮಾತನಾಡಿ, ಮನುಷ್ಯನಿಗೆ ಯೋಗದಿಂದಾಗುವ ಪ್ರಯೋಜನಗಳ ಕುರಿತು ಶಾಲಾ ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರು. ಬಳಿಕ ಶಾಲೆಯ ಎಲ್ಲ ಮಕ್ಕಳಿಗೆ ಯೋಗಾಸನಗಳ ವಿವಿಧ ಭಂಗಿಗಳ ಕುರಿತು ಶಿಕ್ಷಕರು ಮಾಹಿತಿ ಹೇಳಿಕೊಟ್ಟರು.
ಬಾಳೇಶ ಕೂಟೂರ, ಸಿದ್ದಪ್ಪ ಹಕ್ಕಿ, ಗಿರಿಗೌಡ ಪಾಟೀಲ, ಎನ್.ಎ.ಮಿರ್ಜಾನಾಯ್ಕ, ಎಲ್.ಎ.ಶಿರಹಟ್ಟಿ, ಸಂಜೀವ ಮೆಳವಂಕಿ, ಜಿ.ವಿ.ನಾಯ್ಕ, ರೇಣುಕಾ ಅರಭಾಂವಿ, ರೇಣುಕಾ ಕತ್ತಿ, ಶ್ರೀಶೈಲ ದಂಡಿನ, ಉಭಯ ಶಾಲೆಗಳ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.