ಗೋಕಾಕ:ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ

ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ
ಗೋಕಾಕ ಜೂ 18 : ತಾಲೂಕಿನ ಅಂಕಲಗಿ ಮತ್ತು ದುಪದಾಳ ಗ್ರಾಮ ಪಂಚಾಯತಿಗಳನ್ನು ಪಟ್ಞಣ ಪಂಚಾಯತ್ ಮಾಡಲು ಕ್ರಮಕೈಗೋಳಲಾಗುವುದು ಎಂದು ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಸೋಮವಾರದಂದು ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
ನಗರ ಪ್ರದೇಶಕ್ಕೆ ಪೂರಕವಾಗಿ ಅತ್ಯಂತ ವೇಗದಿಂದ ಬೆಳೆಯುತ್ತಿರುವ ತಾಲೂಕಿನ ಅಂಕಲಗಿ ಮತ್ತು ದುಪದಾಳ ಸೇರಿದಂತೆ ಇನ್ನುಳಿದ ಪಂಚಾಯಿತಿಗಳನ್ನು ಆದ್ಯತೆಯ ಮೇರೆಗೆ ಪಟ್ಟಣ ಪಂಚಾಯತಿಗಳನ್ನಾಗಿ ಮಾಡಲು ಕ್ರಮ ಕೈಗೋಳ್ಳಲಾಗುವುದು
ಅಧಿಕಾರಿಗಳು ಅಭಿವೃದ್ಧಿಯಲ್ಲಿ ಜಾತಿ ರಾಜಕಾರಣ ಮಾಡೆದೆ ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು
ಸಿಟಿ ಸರ್ವೆ , ತಹಶೀಲ್ದಾರ್ , ಕೆಎಸ್ಆರಟಿಸಿಗಳಲ್ಲಿ ಏಜೆಂಟರ ಹಾವಳಿ ಬಗ್ಗೆ ಗಮನಕ್ಕೆ ಬಂದಿದ್ದು , ಅದನ್ನು ತಡೆಗಟ್ಟಿ ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸರಿಯಾಗಿ ಒದಗಿಸುವ ನೀಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು
ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರಣೆಯನ್ನು ಸಭೆಗೆ ತಿಳಿಸಿದರು
ಸಭೆಯಲ್ಲಿ ತಹಶೀಲ್ದಾರ್ ಜಿ.ಎಸ್ ಮಾಳಗಿ , ಡಿವಾಯ್ಎಸಪಿ ಡಿ.ಟಿ ಪ್ರಭು , ಪೌರಾಯುಕ್ತ ಚನ್ನಪಗೌಡರ , ತಾ.ಪಂ ಆಡಳಿತಾಧಿಕಾರಿ ಚುನ್ನಪನವರ , ಜಿ.ಪಂ ಸದಸ್ಯ ಟಿ.ಆರ್.ಕಾಗಲ , ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ನೂತನ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ತಾಲೂಕಾಡಳಿತದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು