ಗೋಕಾಕ:ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು
ಗೋಕಾಕ ಜೂ 4 : ಕುಡಿದ ಅಮಲಿನಲ್ಲಿ ಯವಕನೋರ್ವನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೋಳಿಸಿದ ಘಟನೆ ಗೋಕಾಕ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ
ಬಸವರಾಜ ಲಕ್ಷ್ಮಣ ಬೋಸಲೆ (25) ಗಂಭೀರವಾಗಿ ಗಾಯಗೊಂಡಿದ್ದು , ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದಾನೆ . ನಗರದ ಕ್ರೀಮ ಕಾರ್ನರ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ . ಕುಡಿದ ಅಮಲಿನಲ್ಲಿ ಸೌರಭ ಪಿಟಗಿ ಎಂಬ ಯುವಕ ಬಸವರಾಜ ಲಕ್ಷ್ಮಣ ಬೋಸಲೆ ಎಂಬಾತನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಫರಾರಿಯಾಗಿದ್ದಾನೆಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದು , ಘಟನೆಗೆ ಯಾವುದೆ ಸ್ವಷ್ಟ ಕಾರಣ ತಿಳಿದುಬಂದಿಲ್ಲಾ
ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ತ್ರೀವಶೋಧ ನಡೆಸಿದ್ದಾರೆ