ಘಟಪ್ರಭಾ:ವಿವಿಧೆಡೆ.ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ
ವಿವಿಧೆಡೆ ವಿಜಂಭ್ರನೆಯಿಂದ ಕನಕದಾಸರ ಜಯಂತಿ ಆಚರಣೆ
ಘಟಪ್ರಭಾ ನ 6: ಸಮೀಪದ ರಾಜಾಪೂರ ಗ್ರಾಮ ಪಂಚಾಯತಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಗ್ರಾ.ಪಂ ಅಧಕ್ಷೆ ಸಿದ್ದವ್ವ ಜೆಟ್ಟನ್ನವರ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವಂತ ಕಮತಿ, ವಿಠ್ಠಲ ಪಾಟೀಲ, ಬೈರಪ್ಪ ಯಕ್ಕುಂಡಿ, ರಾಜು ಬೈರುಗೋಳ, ಬಸವರಾಜ ಪಂಡ್ರೋಳಿ, ರಾಮು ಪಾಟೀಲ, ಗ್ರಾ.ಪಂ ಉಪಾಧಕ್ಷರು, ಸದಸ್ಯರುಗಳಾದ ಬಸವರಾಜ ಹೊಸೂರ, ಉದಯ ಜಟ್ಟೆನ್ನವರ, ಸಂಗಯ್ಯಾ ಹೊನೂರ, ಸುರೇಶ ಬೈರುಗೋಳ, ಗ್ರಾಮ ಲೆಕ್ಕಾಧಿಕಾರಿ ಚೂನಪ್ಪ ಪಾಕನಟ್ಟಿ, ವಾಶೇಪ್ಪ ಪಂಡ್ರೋಳಿ, ರಾಮಚಂದ್ರ ಕೊಡ್ಲಿ, ಮಹಾದೇವ ಜಟ್ಟೆನ್ನವರ, ಕೆಂಪಣ್ಣಾ ಕಮತಿ, ಅಭಿವೃದ್ಧಿ ಅಧಿಕಾರಿ ಎಚ್.ವಾಯ್.ತಾಳಿಕೋಟಿ ಹಾಗೂ ಸಿಬ್ದಂದಿ ವರ್ಗದವರು ಉಪಸ್ಥಿತರಿದ್ದರು.
ರಾಜಾಪೂರ: ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕ ಜಯಂತಿ :
ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಕ್ತ ಕನಕದಾಸರ 530ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರಾ.ಪಂ ಸದಸ್ಯ ಬಸವರಾಜ ಹೊಸೂರ ಮಾತನಾಡಿ ನಾನು ಅನ್ನುವ ಅಹಂಕಾರ ಯಾವಾಗ ಮನುಷ್ಯನಲ್ಲಿ ಅಳಿದು ಹೋಗುತ್ತದೆಯೋ ಆಗ ಮಾತ್ರ ಅತ್ಯುತ್ತಮ ಸಾಧನೆ ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಕನಕನ ಕುರಿತು ಮಕ್ಕಳು ಮಾಡಿದ ನಾಟಕ ಕಥೆ, ಕವನ, ಹಾಡು, ನೃತ್ಯಗಳು ಎಲ್ಲರ ಗಮನ ಸೆಳೆದವು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವ ಜಟ್ಟೆನ್ನವರ, ಸಧ್ಯಸ್ಯರಾದ ಸಂಜು ಬೈರುಗೋಳ, ಸಂಗಯ್ಯ ಹೂನೂರ, ಉದ್ದಪ್ಪ ಜಟ್ಟೆನ್ನವರ, ಹಿರಿಯರಾದ ಗೋಪಾಲ ಅಥಣಿ, ಪುಂಡಲಿಕ ಕೊಡ್ಲಿ, ಸಿದ್ರಾಮ ಜಟ್ಟೆನ್ನವರ, ಕೆಂಪಣ್ಣ ಕಮತಿ, ಮಲಿಕ್ಜಾನ್ ಮುಲ್ಲಾ, ಗೋಪಾಲ ಕೆಂಪವ್ವಗೋಳ, ಗುರು ಗಡಹಿಂಗ್ಲಜ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
ಪ್ರಧಾನ ಗುರುಗಳಾದ ಎನ್.ಡಿ.ಪೂಜೇರಿ ಸ್ವಾಗತಿಸಿದರು. ಸಹ ಶಿಕ್ಷಕಿ ರೇಖಾ ಪೂಜಾರ ನಿರೂಪಿಸಿದರು. ಕು. ದೀಪಾ ಕಬ್ಬೂರಮಠ ವಂದಿಸಿದರು.
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ಕಾರ್ಯಾಲಯದಲ್ಲಿ ಸಂತ ಶ್ರೇಷ್ಠ ಶ್ರೀ ಕನಕದಾಸರ 530 ನೇ ಜಯಂತಿಯನ್ನು ಸೋಮವಾರದಂದು ಆಚರಿಸಲಾಯಿತು.
ಹಿರಿಯರಾದ ಡಿ.ಎಂ.ದಳವಾಯಿಯವರು ಶ್ರೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಗಳಾದ ಸಲೀಮ ಕಬ್ಬೂರ, ರಾಮಣ್ಣ ನಾಯಿಕ, ನಾಗರಾಜ ಚಚಡಿ, ಗಂಗಾಧರ ಬಡಕುಂದ್ರಿ, ಇಮ್ರಾನ ಬಟಕುರ್ಕಿ, ಮಲ್ಲೇಶ ಕೋಳಿ, ಈರಗೌಡ ಕಲಕುಟಗಿ, ಮಾರುತಿ ಹುಕ್ಕೇರಿ, ಗ್ರಾಮ ಲೇಕ್ಕಾಧಿಕಾರಿ ಜಗದೀಶ ಚೂರಿ, ಪ.ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮಸ್ಥರಾದ ಸುರೇಶ ಪೂಜೇರಿ, ಶಿವಪುತ್ರ ಕೊಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕೆಂಪಣ್ಣಾ ಚೌಕಶಿ, ಸುಭಾಸ ಕಾಡದವರ, ಲಕ್ಷ್ಮಣ ಮೇತ್ರಿ ಹಾಗೂ ಸಿಬ್ದಂದಿ ವರ್ಗದವರು ಸೇರಿದಂತೆ ಅನೇಕರು ಇದ್ದರು.