RNI NO. KARKAN/2006/27779|Saturday, June 14, 2025
You are here: Home » breaking news » ಬೆಳಗಾವಿ:ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿಯಲ್ಲ : ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಗುಡುಗು

ಬೆಳಗಾವಿ:ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿಯಲ್ಲ : ಸಹೋದರನ ವಿರುದ್ಧ ಸತೀಶ್ ಜಾರಕಿಹೊಳಿ ಗುಡುಗು 

ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿಯಲ್ಲ : ಸಹೋದರನ  ವಿರುದ್ಧ ಸತೀಶ್ ಜಾರಕಿಹೊಳಿ ಗುಡುಗು

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಸೆ.8:

ರಾಜಕೀಯ ಮಾಡುವುದಕ್ಕಾಗಿ ನಾನು ಕೆಲಸ ಮಾಡುವುದಿಲ್ಲ. ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿಯಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ಗುಡುಗಿದ್ದಾರೆ.

 ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು                          ರಾಜಕಾರಣದಲ್ಲಿ ಅವರಿಗೆ ಗಂಭೀರತೆ ಎಂಬುದೇ ಇಲ್ಲ ಎಂದು ಛೇಡಿಸಿದರು.ರಮೇಶ್ ರಾಜ್ಯಕ್ಕೆ ದೊಡ್ಡವನಿರಬಹುದು. ನಮ್ಮ ದೃಷ್ಠಿಯಲ್ಲಿ ಅವರು ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಬಿಗ್ ಜೀರೋ. ಸರ್ಕಾರ ಬೀಳಿಸಿ ಹೊರಗಡೆ ದೊಡ್ಡ ಹೆಸರು ಮಾಡಿರಬಹುದು. ಆದರೆ ಜನರಿಗೆ ಏನೂ ಉಪಯೋಗವಿಲ್ಲ ಎಂದು ತಿಳಿಸಿದರು.

ಗೋಕಾಕ್‍ನಲ್ಲಿ ಸಾಮ್ರಾಜ್ಯ ಕಟ್ಟಿದ್ದು ನಾನು. ನನ್ನ ಮೇಲೆ ಜವಾಬ್ದಾರಿಯಿದೆ. ಅದಕ್ಕಾಗಿ ನಾನು ಗೋಕಾಕ್‍ಗೆ ಹೋಗುತ್ತೇನೆ ಎಂದಿರುವ ಅವರು ಗೋಕಾಕ್‍ಗೆ ಸತೀಶ್ ಪದೇ ಪದೇ ಬರುತ್ತಿದ್ದಾರೆ ಎಂದು ನಿನ್ನೆ ರಮೇಶ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸತೀಶ್, ಗೋಕಾಕ್‍ನಲ್ಲಿ ನನ್ನ ಜನ, ನನ್ನ ನಂಬಿದವರು ಇದ್ದಾರೆ. ಅವರ ಸಲುವಾಗಿ ನಾನು ಗೋಕಾಕ್‍ಗೆ ಹೋಗುತ್ತೇನೆ ಎಂದರು.

 

ಲಖನ್- ರಮೇಶ್ ನಡುವೆ ಜಗಳ ಹಚ್ಚಿ ನಾನು ಲಾಭ ಪಡೆಯುತ್ತಿಲ್ಲ, ನನಗೆ ಯಾವುದೇ ಲಾಭ ಆಗುತ್ತಿಲ್ಲ, ಜನರಿಗೆ ಗೊತ್ತಿದೆ,ಗೋಕಾಕ್ ನಲ್ಲಿ ಹೋಗಿ ಶಾಸಕ ಆಗಬೇಕು ಅಂತೇನಿಲ್ಲ. ಜನರನ್ನ ಸೇರಿಸಿ ಬಾಯಿಗೆ ಬಂದಿದ್ದನ್ನ ಮಾತಾನಾಡಿದ್ದಾನೆ ಎಂದು ಟಾಂಗ್ ನೀಡಿದರು.

 

Related posts: