RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಬೆಳಗಾವಿ:ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ 

ಶುಭ ಶುಕ್ರವಾರ : ಬೆಳಗಾವಿ ಜಿಲ್ಲೆಯ ಘಟಾನುಘಟ್ಟಿ ನಾಯಕರಿಂದ ನಾಮಪತ್ರ ಸಲ್ಲಿಕೆ
ಬೆಳಗಾವಿ ಏ 20 : ಇಂದು ಶುಭ ಶುಕ್ರವಾರ ಇರುವುದರಿಂದ ಜಿಲ್ಲೆಯ ಘಟಾನುಘಟ್ಟಿ ನಾಯಕರು ನಾಮಪತ್ರ ಸಲ್ಲಿಸಿ ತಮ್ಮ ಸ್ವರ್ಧೆ ಖಚಿತ ಪಡಿಸಿದ್ದಾರೆ

ಕಳೆದ ನಾಲ್ಕು ಅವಧಿಗೆ ಗೋಕಾಕ ಸಾಮಾನ್ಯ ಕ್ಷೇತ್ರದಿಂದ ಗೆಲುವ ಸಾಧಿಸಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಇಂದು ತಮ್ಮ ಕಿರಿಯ ಸಹೋದರ ಮತ್ತು ಕೆವಲ ಬೆರಳೆಣಿಕೆಯಷ್ಟು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ .

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಲು ಹೊನಗಾಡುತ್ತಿರುವ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಮತಿ ಲಕ್ಷೀ ಹೆಬ್ಬಾಳಕರ ಅವರು ಸಹ ಶುಭ ಶುಕ್ರವಾರಕ್ಕೆ ಮೊರೆ ಹೋಗಿ ಹೂವುಗಳನ್ನು ಡಬ್ಬಿಯಲ್ಲಿ ಹಿಡಿದುಕೊಂಡೆ ನಾಮಪತ್ರ ಸಲ್ಲಿಸಿದ್ದಾರೆ .

ಟಿಕೆಟಗಾಗಿ ಟೈಟ್ ಪೈಟ ನಡೆದ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಶಾ‌ಸಕ ಬಿಜೆಪಿಯ ಅಭಯ ಪಾಟೀಲ ಸಹ ಇಂದು ಶುಕ್ರವಾರ ವಾಗಿರುವುದರಿಂದ ಸದ್ದಿಲದೆ ಬಂದು ಸರಳವಾಗಿ ನಾಮಪತ್ರ ಸಲ್ಲಿಸಿದರು

ಹುಕ್ಕೇರಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಉಮೇಶ್ ಕತ್ತಿ ಕೂಡ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕ್ಕೆ ಬಳಿಕ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತೆ. ನಾನು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ. ಯಾವುದೇ ಸಂಘ ಸಂಸ್ಥೆ ಅಥವಾ ಸೊಸೈಟಿಗಳನ್ನ ನುಂಗಿ ಹಾಕಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಎ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. 

ಇನ್ನು ಇಂದೇ ಹುಕ್ಕೇರಿ ಕ್ಷೇತ್ರದ ಅಧಿಕೃತ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಎ.ಬಿ.ಪಾಟೀಲ್‌ ಅವರು ಸಹ ನಾಮಪತ್ರ ಸಲ್ಲಿಸಿದರು. ಚುಣಾವಣಾ ಅಧಿಕಾರಿ ಬಿ.ವಿ.ಕುಲಕರ್ಣಿಯವರಿಗೆ ನಾಮಪತ್ರ ಸಲ್ಲಿಸಿ ಗೆಲವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಎ.ಬಿ.ಪಾಟೀಲ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು. 

ರಾಯಬಾಗ ಎಸ್ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರದೀಪ ಮಾಳಗಿ ಸಹ ನಾಮಪತ್ರ ಸಲ್ಲಿಸಿದರು. 
ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಪ್ರದೀಪ ಮಾಳಗಿ, ರಾಯಬಾಗ ಮಿನಿ ವಿಧಾನಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. 2003 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರದೀಪ ಮಾಳಗಿ, ಈ ಬಾರಿ ಕಾಂಗ್ರೆಸ್‌‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಅಥಣಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟೊಳ್ಳಿ ನಾಮಪತ್ರ ಸಲ್ಲಿದರು. ಇಬ್ಬರೂ ನಾಯಕರು ಅಪಾರ ಬೆಂಬಲಿಗರೊಂದಿಗೆ ಪ್ರತ್ಯೇಕವಾಗಿ ರೋಡ್‌ ಶೋ ಮೂಲಕ ತಹಸೀಲ್ದಾರ್‌‌ ಕಚೇರಿಗೆ ಆಗಮಿಸಿದರು. ಬಳಿಕ ಅಥಣಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು

Related posts: