RNI NO. KARKAN/2006/27779|Saturday, June 14, 2025
You are here: Home » breaking news » ಮೂಡಲಗಿ:ಇಬ್ರಾಹಿಂ ಸುತಾರ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ : ಶಾಸಕ ಬಾಲಚಂದ್ರ

ಮೂಡಲಗಿ:ಇಬ್ರಾಹಿಂ ಸುತಾರ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ : ಶಾಸಕ ಬಾಲಚಂದ್ರ 

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಯಾದವಾಡದಲ್ಲಿ ಇತ್ತೀಚೆಗೆ ನಡೆದ ಅಯ್ಯಾಚಾರ, ಗುರುವಂದನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಇಬ್ರಾಹಿಂ ಸುತಾರ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ : ಶಾಸಕ ಬಾಲಚಂದ್ರ

ಮೂಡಲಗಿ ಮಾ 16 : ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರು ಕರ್ನಾಟಕದ ಕಬೀರ ಎಂದು ಖ್ಯಾತರಾದವರು. ಜೊತೆಗೆ ಭಾವೈಕ್ಯತೆಯ ಸಂದೇಶ ಸಾರುವ ಮೂಲಕ ಎಲ್ಲ ಸಮಾಜದ ಪಂಗಡಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾನ್ ಚೇತನ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಯಾದವಾಡ ಗ್ರಾಮದ ಚೌಕಿ ಮಠದಲ್ಲಿ ಸೋಮವಾರದಂದು ಜರುಗಿದ ಅಯ್ಯಾಚಾರ, ಗುರುವಂದನೆ ಹಾಗೂ ಸನ್ಮಾನ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು, ಸುತಾರ ಅವರು ಸಮಾಜದ ಕಳಕಳಿಯನ್ನು ಹೊಂದಿದ ನಿಜವಾದ ಸಮಾಜ ಸುಧಾರಕ. ಕಬೀರ ಹಾಗೂ ಸಂತ ಶಿಶುನಾಳ ಶರೀಫರ ತತ್ವ ಪದಗಳನ್ನು ಹಾಡುವ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆಂದು ಶ್ಲಾಘಿಸಿದರು.
ಇಬ್ರಾಹಿಂ ಅವರ ಜೊತೆಗೆ ಘಟಪ್ರಭಾದ ಮಾಸ್ ಸಂಸ್ಥೆಯ ಶೀತವ್ವಾ ಜೋಡಟ್ಟಿ ಅವರಿಗೂ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು, ಪ್ರಶಸ್ತಿಯು ಅರ್ಹರನ್ನು ಗುರುತಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆಂದು ಹೇಳಿದರು.
ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಸಂಘ ಸಂಸ್ಥೆಗಳು ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಕಲಾವಿದರಿಗೆ ಗೌರವ ಸಿಗುತ್ತದೆ. ಚೌಕಿ ಮಠವು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತ ಹಿಂದೂ-ಮುಸ್ಲಿಂ ಬಾಂಧವರನ್ನು ಒಂದುಗೂಡಿಸುವ ಭಾವೈಕ್ಯತೆ ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನೀಯವೆಂದು ಹೇಳಿದರು.
ನಮ್ಮ ಜಾತಿ ಧರ್ಮ ಯಾವುದೇ ಇದ್ದರೂ ಇತರೇ ಸಮಾಜದವರನ್ನು ಗೌರವದಿಂದ ಕಾಣಬೇಕು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾರಿದ ಸಮಾನತೆಯ ಮಂತ್ರವನ್ನು ನಾವೆಲ್ಲರೂ ಜಪಿಸಬೇಕಾಗಿದೆ. ಎಲ್ಲ ಜಾತಿ-ಧರ್ಮಗಳು ಪರಸ್ಪರ ಒಂದಾಗಿ ಬದುಕಿದರೆ ಅದುವೆ ನಾವುಗಳು ಬಸವಣ್ಣನವರಿಗೆ ಕೊಡುವ ಗೌರವವೆಂದರು. ಬಸವಣ್ಣನವರ ಕಂಡ ಕನಸು ನನಸು ಮಾಡಲು ನಾವೆಲ್ಲರೂ ಪ್ರಯತ್ನಿಸೋಣ. ಜಾತಿ-ಮತ-ಪಂಥ ಎಂಬ ಬೇಧಭಾವವನ್ನು ಅಳಿಸಿ ಹಾಕಿ ಜಾತ್ಯಾತೀತತೆಯ ಎತ್ತಿ ಹಿಡಿಯೋಣ. ಒಂದಾಗಿ-ಒಗ್ಗಟ್ಟಾಗಿ ಬಾಳೋಣ. ಸುಂದರ ಸಮಾಜ ನಿರ್ಮಾಣ ಮಾಡೋಣವೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚೌಕಿ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಸಾನಿಧ್ಯವನ್ನು ಕಲ್ಮಠದ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಾವನ ಸವದತ್ತಿಯ ಶಿವಶಂಕರ ಮಹಾಸ್ವಾಮಿಗಳು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಇಬ್ರಾಹಿಂ ಸುತಾರ ಅವರಿಗೆ ಸ್ವಾಮೀಜಿಗಳು ತುಲಾಭಾರ ನೆರವೇರಿಸಿದರು.
ರಾಷ್ಟ್ರಪ್ರಶಸ್ತಿ ಪುರಸ್ಕøತ ಸಿದ್ದು ದಿವಾನ್ ಅವರು ವಿಶೇಷ ಉಪನ್ಯಾಸ ನೀಡಿದರು.
ಮುಖಂಡ ಈಶ್ವರ ಕತ್ತಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಸಾದು ಸಂತರ ಪಾತ್ರ ಮುಖ್ಯವಾಗಿದೆ. ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನಮಗೆಲ್ಲ ಹೆಮ್ಮೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಶ್ರೀಶೈಲ ಕಲ್ಯಾಣಿ, ಶಿವನಪ್ಪ ಚಕ್ಕೆನ್ನವರ, ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಮುಖೇಶ ಸಿನ್ಹಾ, ಪಿಕೆಪಿಎಸ್ ಅಧ್ಯಕ್ಷ ಅಮೀನಸಾಬ ಯಳ್ಳೂರ, ಬಸವರಾಜ ಹಿಡಕಲ್, ಎಂ.ಎಸ್. ದಂತಾಳಿ, ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ನಾಗರೀಕರಿಗೆ ಸನ್ಮಾನ : ಇದೇ ಸಂದರ್ಭದಲ್ಲಿ ಚೂಡಾ ಮಾಣಿಸಾ ವಾಗುಲೆ, ದೇವನಗೌಡ ಪಾಟೀಲ, ಮಹಾಲಿಂಗಪ್ಪ ಕತ್ತಿ, ಗಂಗಪ್ಪ ತಾಂವಶಿ, ಶಿದ್ಲಿಂಗಪ್ಪ ಮುಗಳಖೋಡ, ವಸಂತ ಗಿರಿಸಾಗರ, ಹಣಮಪ್ಪ ಲಕ್ಷಾಣಿ, ವೆಂಕಪ್ಪ ಮಾಸರಡ್ಡಿ, ಅಪ್ಪಣ್ಣಾ ಪೂಜೇರಿ, ಧರ್ಮಣ್ಣಾ ಬೆಳಗಲಿ, ಸೈದುಸಾಬ ಬನ್ನೂರ, ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

Related posts: