ಅಥಣಿ :ಪ್ರಧಾನಿ ಮನ್ ಕೀ ಬಾತ ಬೀಟ್ಟು ಕಾಮಕೀ ಬಾತ ಮಾಡಲಿ : ಎಐಸಿಸಿ ಅಧ್ಯಕ್ಷ ರಾಹುಲ್ ವಾಗ್ದಾಳಿ
ಪ್ರಧಾನಿ ಮನ್ ಕೀ ಬಾತ ಬೀಟ್ಟು ಕಾಮಕೀ ಬಾತ ಮಾಡಲಿ : ಎಐಸಿಸಿ ಅಧ್ಯಕ್ಷ ರಾಹುಲ್ ವಾಗ್ದಾಳಿ
ಅಥಣಿ ಫೆ 24: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಪ್ಪು ಹಣತಂದು ದೇಶದ ಪ್ರತಿಯೋಬ್ಬ ಪ್ರಜೆಯ ಖಾತೆಗೆ ಜಾಮಾಮಾಡುತೆನೆಂದು ಹೇಳಿದರು ಆದರೆ ಮಾತಿನಂತೆ ನಡೆದು ಕೊಂಡಿಲ್ಲಾ ಹೀಗೆ ದೇಶದ ಜನತೆಗೆ ಬರಿ ಸುಳ್ಳು ಹೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಯಿಸಿದರು
ನಗರದಲ್ಲಿ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ಕನ್ನಡದಲ್ಲಿಯೇ ನಮಸ್ಕಾರ ಎಂದು ಹೇಳಿ ಭಾಷಣ ಪ್ರಾರಂಭಿಸಿದ ರಾಹುಲ್, ಶಿಶುನಾಳ ಷರೀಫ, ಬಸವಣ್ಣವರ ವಚನ ಇವನಾರವ ಇವನಾರವ ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದು ರೈತರ ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಸ್ಸಿ-ಎಸ್ಟಿಗೆ ಇಡೀ ದೇಶದಲ್ಲಿ 50 ಸಾವಿರ ಕೋಟಿ ಹಣ ನೀಡಿದೆ. ರಾಜ್ಯ ಸರ್ಕಾರ 27 ಕೋಟಿಗಿಂತ ಹೆಚ್ಚು ಹಣ ನೀಡಿದೆ ಎಂದು ತಿಳಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾರೆ. ಪ್ರಧಾನಿ ಮೋದಿಯವರು ದೇಶದಲ್ಲಿ ಯಾವುದೇ ಕಾರ್ಯ ಮಾಡಿದ್ದರೂ ಅದನ್ನು ತಾವೇ ಮಾಡಿರುವುದಾಗಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಮೊದಲು ತಿಳಿದುಕೊಳ್ಳಲಿ. ಮೋದಿ ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಮಾಡಲಿ ಎಂದ ಅವರು ನಮ್ಮಸ್ಕಾರ ಎನ್ನುತ್ತ ಕನ್ನಡದಲ್ಲಿಯೇ ಭಾಷಣ ಮುಗಿಸಿದರು.