ಗೋಕಾಕ:ಕೈ ಪಕ್ಷದಲ್ಲಿ ಡಿಕೆಶಿ ಏಕಾಂಗಿಯಾಗಿದ್ದಾನೆ : ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ
ಕೈ ಪಕ್ಷದಲ್ಲಿ ಡಿಕೆಶಿ ಏಕಾಂಗಿಯಾಗಿದ್ದಾನೆ : ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 6 :
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ ಶಿವಕುಮಾರ್ ಏಕಾಂಗಿಯಾಗಿದ್ದಾನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಆರೋಪಿಸಿದರು ಶನಿವಾರದಂದು ನಗರಸಭೆ ಆವರಣದಲ್ಲಿ ಅಧಿಕಾರಿಗಳ ಹಾಗೂ ನಗರಸಭೆ ಸದಸ್ಯರ ಸಭೆಯ ಬಳಿಕೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು ನಾನು ಸುಳ್ಳು ಹೇಳುತ್ತೇನೆಂದು ಹೇಳಿರುವ ಡಿಕೆಶಿ ಏಕಾಂಗಿಯಾಗಿ ಹೀಗೆ ಮಾತನಾಡುತ್ತಿದ್ದಾನೆ. ನಾನು ಸುಳ್ಳು ಹೇಳುತ್ತಿದ್ದರ ಕಾಂಗ್ರೆಸ್ ಸರಕಾರ ಉರುಳಲು ಸಾಧ್ಯವಾಗುತ್ತಿರಲ್ಲಿ ಎಂಬುದನ್ನು ಡಿಕೆಶಿ ಮರತಿರ ಬಹುದು ಮುಂದೆ ಅವನಿಗೆ ತಿಳಿಯುತ್ತದೆ ಎಂದು ಸಚಿವರು ಖಾರವಾಗಿ ಪ್ರತಿಕ್ರಿಯೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕೇಳಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಿದ್ದರಾಮಯ್ಯ ಒಬ್ಬ ಮಹಾನ ನಾಯಕ ಅವರ ಪಕ್ಷ ಬೇರೆ ಇದ್ದರು ಸಹ ಅವರು ನಮ್ಮ ನಾಯಕರು ಅವರ ಬಗ್ಗೆ ಗೌರವವಿದೆ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು ಈಗಾಗಲೇ ನಗರಸಭೆ ಅಧಿಕಾರಿಗಳ ಮತ್ತು ಸದಸ್ಯರ ಸಭೆ ನಡೆಯಿಸಿ ನಗರದ ಸಮಗ್ರ ಅಭಿವೃದ್ಧಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ ಆದಷ್ಟು ಬೇಗ ನಗಯದಲ್ಲಿ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರು ನಗರಸಭೆ ಅಧಿಕಾರಿಗಳು ಕಛೇರಿಗೆ ಬಂದ ಸಾರ್ವಜನಿಕ ರೊಂದಿಗೆ ಸರಿಯಾಗಿ ವರ್ತಿಸದೆ ಸತಾಯಿಸುತ್ತಿದ್ದಾರೆ ಎಂದು ಪತ್ರಕರ್ತರು ಸಚಿವ ಗಮನ ಸಳೆದಾಗ ಲಾಕಡೌನ ಸಂಧರ್ಭದಲ್ಲಿ ಕೆಲವು ಅವ್ಯವಸ್ಥೆಗಳು ಉಂಟಾಗಿರ ಬಹುದು ಮುಂದೆ ಹಾಗೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದು ಎಂದು ಸಚಿವರು ಉತ್ತರಿಸಿದರು.
ರಾಜ್ಯಸಭೆ ಚುನಾವಣೆಗೆ ಕತ್ತಿ ಮತ್ತು ಕೋರೆ ನಡುವೆ ಪೈಪೋಟಿ ಇದೆ ನೀವು ಯಾರನ್ನು ಬೆಂಬಲಿಸುತ್ತಿರಿ ಎಂಬ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೈಕಮಾಂಡ್ ಅಂತಿಮ ಗೋಳಿಸುವ ಅಭ್ಯರ್ಥಿಗೆ ನಮ್ಮ ಬೆಂಬಲವೆಂದಷ್ಟೆ ಉತ್ತರಿಸಿ ಜಾನ್ಮೆ ಮೆರದರು
ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ , ನಗರಸಭೆ ಸದಸ್ಯ ಎಸ್.ಎ ಕೊತವಾಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು