ಗೋಕಾಕ:ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ : ಚಂದ್ರಶೇಖರ ಅಕ್ಕಿ
ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ : ಚಂದ್ರಶೇಖರ ಅಕ್ಕಿ
ಗೋಕಾಕ ಡಿ 29: ವಿಶ್ವದ ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲಬಲ್ಲ ಮೇರುಕೃತಿ ಶ್ರೀ ರಾಮಾಯಣ ದರ್ಶನಂ ರಚಿಸಿ ಕುವೆಂಪು ಅವರು ರಾಷ್ಟ್ರಕವಿಗಳಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆಂದು ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ಅಕ್ಕಿ ಹೇಳಿದರು.
ಶುಕ್ರವಾರದಂದು ನಗರದ ಜ್ಞಾನದೀಪ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕುವೆಂಪು ಅವರು ರಚಿಸಿದ ಮಹಾಕಾವ್ಯ ಬದುಕಿಗೆ ಸಂಸ್ಕಾರವನ್ನು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಮಂಥರೆಯ ಪಾತ್ರವನ್ನು ಕುವೆಂಪು ಅವರು ಮರುಸೃಷ್ಟಿ ಮಾಡಿದ್ದು ಒಂದು ವಿಶೇಷ ಎಂದು ಹೇಳಿದರು.
ಪ್ರೋ ಗಂಗಾಧರ ಮಳಗಿ ಮಾತನಾಡುತ್ತಾ ಕುವೆಂಪು ಅವರ ವಿಶ್ವಮಾನವ ಸಂದೇಶ ಮೌಲ್ಯಯುತ್ತವಾದ್ದು, ಪ್ರತಿಯೊಂದು ಮಗುವನ್ನು ಅಲ್ಪವನ್ನಾಗಿ ಮಾಡದೇ ವಿಶ್ವ ಮಾನವನ್ನಾಗಿ ಮಾಡುವುದೇ ಶಿಕ್ಷಣದ ಗುರಿಯಾಗಬೇಕೆಂದು ಹೇಳಿದ್ದರು, ಅದನ್ನು ಆಚರಣೆ ತರುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್.ಜಿ.ಬರಬರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ.ಜೆ.ಎಮ್.ಪಾಟೀಲ, ವಿದ್ಯಾರ್ಥಿಗಳ ಮುಖ್ಯ ಕಾರ್ಯದರ್ಶಿ ಅನಿತಾ ಅಮ್ಮಣಗಿ, ದೀಪಾ ಪಾಟೀಲ, ಅಮೃತಾ, ನೀಲಾಂಬಿಕಾ, ಸರ್ವೆಶ ಗುರುಪುತ್ರ ಸೇರಿದಂತೆ ಅನೇಕರು ಇದ್ದರು.